ಕುಂದಾಪುರ: ಕೋವಿಡ್ ನಿಂದ ಗುಣಮುಖರಾದ 14 ಮಂದಿಗೆ ಹೂವಿನ ಗಿಡ, ಚಾಕ್ಲೇಟ್ ಕೊಟ್ಟು ಬಿಡುಗಡೆ

Spread the love

ಕುಂದಾಪುರ: ಕೋವಿಡ್ ನಿಂದ ಗುಣಮುಖರಾದ 14 ಮಂದಿಗೆ ಹೂವಿನ ಗಿಡ, ಚಾಕ್ಲೇಟ್ ಕೊಟ್ಟು ಬಿಡುಗಡೆ

ಉಡುಪಿ: ಕೋವಿಡ್–19 ಸೋಂಕಿನಿಂದ ಗುಣಮುಖರಾದ ಮಕ್ಕಳು ಸೇರಿದಂತೆ 14 ಮಂದಿಯನ್ನು ರವಿವಾರ ಕುಂದಾಪುರದ ಸರಕಾರಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುದೀರ್ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ|ಪ್ರಶಾಂತ್ ಭಟ್, ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಹಾಗೂ ಇತರರು ಕೊರೋನಾ ಗೆದ್ದು ಮನೆಗೆ ತೆರಳುತ್ತಿರುವವರಿಗೆ ಹೂವಿನ ಗಿಡಗಳನ್ನು ಮತ್ತು ಮಕ್ಕಳಿಗೆ ಚಾಕ್ಲೇಟ್ ನೀಡಿ ಶುಭ ಹಾರೈಸಿದರು.

ಈವರೆಗೆ ಉಡುಪಿ ಜಿಲ್ಲೆಯಲ್ಲಿ 64 ಕೋವಿಡ್ -19 ಸೋಂಕಿನಿಂದ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಸಕ್ರೀಯ ಕೊರೋನಾ ಕೇಸುಗಳ ಸಂಖ್ಯೆ 112 ಕ್ಕೆ ಇಳಿಕೆಯಾಗಿದೆ.


Spread the love