ಕುಕ್ಕಾಜೆ: ಶೈನ್ ಗೈಸ್ ವತಿಯಿಂದ ರಕ್ತದಾನ ಶಿಬಿರ ಸನ್ಮಾನ

Spread the love

ಕುಕ್ಕಾಜೆ: ಶೈನ್ ಗೈಸ್ ವತಿಯಿಂದ ರಕ್ತದಾನ ಶಿಬಿರ ಸನ್ಮಾನ

ಬಂಟ್ವಾಳ: ಎಫ್.ಸಿ.ಸಿ.ಎ (ರಿ) ಶೈನ್ ಗೈಸ್ ಕುಕ್ಕಾಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸೈಯದ್ ಹುಸೈನ್ ಬಾಲವಿ ತಂಙಳ್ ವಹಿಸಿದರು. ಅಧ್ಯಕ್ಷತೆಯನ್ನು ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ್ ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಕೆ. ಇಸ್ಮಾಯಿಲ್, ಕಾರ್ಯದರ್ಶಿ ರಫೀಕ್ ಕೆ., ಕೋಶಾಧಿಕಾರಿ ಹಸೈನಾರ್ ಪಿ.ಕೆ., ಬ್ಲಡ್ ಹೆಲ್ಪ್ ಲೈನ್ ಸ್ಥಾಪಕ ನಿಸಾರ್ ಉಳ್ಳಾಲ, ಕುಕ್ಕಾಜೆ ಫ್ರೌಢ ಶಾಲೆಯ ಅಧ್ಯಾಪಕ ಶಿವಕುಮಾರ್, ಕುಕ್ಕಾಜೆ ಜುಮಾ ಮಸೀದಿ ಮಾಜಿ ಅಧ್ಯಕ್ಷ. ಕೆ. ಮೊಹಿದಿನಬ್ಬ, ಶರಫುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಝೈನುದ್ದೀನ್, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ, ಶೈನ್ ಗೈಸ್ ಅಧ್ಯಕ್ಷ ಗಫಾರ್ ಸಾಗರ್, ಮಾಜಿ ಅಧ್ಯಕ್ಷ ಇಬ್ರಾಹಿಂ ಎ.ಕೆ., ಸಾಮಾಜಿಕ ಕಾರ್ಯಕರ್ತ ಫೈಝಲ್ ಮಂಚಿ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ತಲಪಾಡಿ, ಮಾರ್ನಬೈಲು ಮೆಲ್ಕಾರ್ ಮಹಿಳಾ ಡಿಗ್ರಿ ಕಾಲೇಜ್ ಸಹ ಪ್ರಾಧ್ಯಾಪಕ ಎಂ.ಡಿ.ಮಂಚಿ, ಬ್ಲಡ್ ಹೆಲ್ಪ್‍ಲೈನ್ ನಿರ್ವಾಹಕ ಇಮ್ರಾನ್ ಮದಕ, ಶೈನ್ ಗೈಸ್ ಗೌರವಾಧ್ಯಕ್ಷ ನಝೀರ್, ಉದ್ಯಮಿ ರವಿ ಮಂಚಿ, ಕುಕ್ಕಾಜೆ ಯುವಕ ಮಂಡಲ ಅಧ್ಯಕ್ಷ ರಾಜೇಶ್, ಎಫ್.ಸಿ.ಸಿ.ಎ. ಶೈನ್ ಗೈಸ್ ಕುಕ್ಕಾಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರವನ್ನು ನಝೀರ್ ಸ್ವಾಗತಿಸಿ ವಂದಿಸಿದರು.


Spread the love