ಕುವೈಟ್ ನಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ ಕಿನ್ನಿಗೋಳಿ ಮೂಲದ ಯುವಕ ಸಾವು

Spread the love

ಕುವೈಟ್ ನಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ ಕಿನ್ನಿಗೋಳಿ ಮೂಲದ ಯುವಕ ಸಾವು

ಕಿನ್ನಿಗೋಳಿ: ಕುವೈಟ್ ನಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋಗಿದ್ದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕನನ್ನು ಕಿನ್ನಿಗೋಳಿ ಸಮೀಪದ ಗೋಳಿ ಜೋರ ನಿವಾಸಿ ಮುಹಮ್ಮದ್ ಅನೀಸ್(28) ಎಂದು ಗುರುತಿಸಲಾಗಿದೆ.

ಬಡ ಕುಟುಂಬಕ್ಕೆ ಸೇರಿದ ಹಸನಬ್ಬ ಹಾಗೂ ನಫೀಸಾ ದಂಪತಿಗಳ ಮೂವರು ಮಕ್ಕಳಲ್ಲಿ ಏಕ ಮಾತ್ರ ಪುತ್ರನಾಗಿದ್ದ ಮುಹಮ್ಮದ್ ಅನೀಸ್ ಎರಡು ವರ್ಷಗಳ ಹಿಂದೆ ಕುವೈಟ್ ಗೆ ಉದ್ಯೋಗಕ್ಕೆಂದು ತೆರಳಿದ್ದರು.


Spread the love