ಕೆಪಿಟಿ ಬಳಿ ಬೈಕ್ – ಬಸ್ಸಿನ ನಡುವೆ ಅಫಘಾತ; ಯುವಕನ ಸಾವು

Spread the love

ಕೆಪಿಟಿ ಬಳಿ ಬೈಕ್ – ಬಸ್ಸಿನ ನಡುವೆ ಅಫಘಾತ; ಯುವಕನ ಸಾವು

ಮಂಗಳೂರು: ಬೈಕ್ ಮತ್ತು ಬಸ್ಸಿನ ನಡುವೆ ನಡೆದ ಅಫಘಾತವೊಂದರಲ್ಲಿ ಯುವಕನೋರ್ವ ಮೃತಪಟ್ಟು ಸಹಸವಾರ ಗಾಯಗೊಂಡ ಘಟನೆ ನಗರದ ನಂತೂರು ಕೆಪಿಟಿ ಬಳಿ ಮಂಗಳವಾರ ಸಂಜೆ ಸಂಭವಿಸಿದೆ.

ಮೃತ ಯುವಕನನ್ನು ಇನೋಳಿ ನಿವಾಸಿ ವಿಲ್ಸನ್ ಕೆನಿಲ್ ಡಿ’ಸೋಜ(24) ಮತ್ತು ಗಾಯಗೊಂಡವನು ಇವನ್ ಎಲರೊಯ್ ಮೆಂಡೊನ್ಸಾ ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ವಿಲ್ಸನ್ ಮತ್ತು ಇವನ್ನ ತಮ್ಮ ಬೈಕಿನಲ್ಲಿ ಕೆಪಿಟಿ ಬಳಿಯ ತನ್ನ ಗೆಳೆಯನ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಕೆಪಿಟಿ ಬಳಿಯ ಪೆಟ್ರೋಲ್ ಬಂಕ್ ಬಳಿಕ ಅವರು ತಲುಪಿದ ವೇಳೆ ಖಾಸಗಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದಿದ್ದು, ಅಫಘಾತದ ರಭಸಕ್ಕೆ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದು, ವಿಲ್ಸನ್ ಅವರ ಮೇಲೆ ಬಸ್ಸಿನ ಚಕ್ರ ಹಾದು ಹೋಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇವನ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love