ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ

Spread the love

ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ

ಕುಂದಾಪುರ: ಆರು ವರ್ಷದ ಹಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪ್ರಖರ ಮೂಲಭೂತವಾದಿಯಾಗಿದ್ದ ಯುವಕನೊಬ್ಬ ಮರಳಿ ಹಿಂದು ಧರ್ಮ ಸ್ವೀಕರಿಸಿದ್ದಾನೆ.

ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ನಿವಾಸಿ ಶಿವರಾಮ ಪೂಜಾರಿ ಮತ್ತು ಸುಜಾತಾ ಪೂಜಾರಿ ಪತ್ರು ಸುಕೇಶ್ ಪೂಜಾರಿ (24) ಮಾನಸಿಕವಾಗಿ ಜರ್ಝರಿತನಾಗಿದ್ದ. ಈತನನ್ನು ಸ್ಥಳೀಯರು 2016ರ ಮಾರ್ಚ್ 23ರಂದು ಕೇರಳದ ಎರ್ನಾಕುಲಂನ ಕಂಡನಾಡು ಸಮೀಪ ಚೂರಕ್ಕಾಡ್ ಶಿವಶಕ್ತಿ ಯೋಗ ವಿದ್ಯಾ ಕೇಂದ್ರಂಗೆ ದಾಖಲಿಸಿದ್ದು ಅಲ್ಲಿ ಮರಳಿ ಹಿಂದು ಧರ್ಮ ಸ್ವೀಕರಿಸಿದ್ದಾನೆ.

18 ನೇ ವಯಸ್ಸಿನಲ್ಲಿ ಸುಕೇಶ್ ಇಸ್ಲಾಂ ಧರ್ಮ ಸ್ವೀಕರಸಿ ತಯಬ್ ಶಿಯಾನ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಆತನ ಮನಪರಿವರ್ತನೆ ಮಾಡುವಲ್ಲಿ ಯೋಗಕೇಂದ್ರ ಯಶಸ್ವಿಯಾಗಿದ್ದು, ಸುಕೇಶ್ ಹಿಂದು ಧರ್ಮಕ್ಎಕ ಮರಳಿರುವುದಕ್ಕೆ ಹೆಮ್ಮಾಡಿ ಪರಿಸರದ ವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಅನೇಕ ಯುವಕ ಯುವತಿಯರು ಶಿವಶಕ್ತಿ ಯೋಗ ವಿದ್ಯಾಕೇಂದ್ರಂ ಮೂಲಕ ಹಿಂದು ಧರ್ಮಕ್ಕೆ ಮರಳಿದ್ದು, ಬೇರೆ ಬೇರೆ ರಾಜ್ಯಗಳ ಯುವಕ-ಯುವತಿಯರು ಸನಾತನ ಧರ್ಮದ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ.


Spread the love