ಕೊಕ್ರಾಡಿ: ಸಿಡಿಲ ಆಘಾತಕ್ಕೆ ಇಬ್ಬರು ಬಲಿ

Spread the love

ಕೊಕ್ರಾಡಿ: ಸಿಡಿಲ ಆಘಾತಕ್ಕೆ ಇಬ್ಬರು ಬಲಿ

ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಜಿಲ್ಲೆಯ ಕೆಲವೆಡೆ ಶುಕ್ರವಾರ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿ ಗ್ರಾಮದ ಬನತ್ಯರಡ್ಡ ಎಂಬಲ್ಲಿ ಗುರುವಾರ ರಾತ್ರಿ ಸಿಡಿಲಿನ ಆಘಾತದಿಂದ ಕೃಷಿಕರಾದ ಸಂಜೀವ ಮೂಲ್ಯ (55), ಅವರ ಪತ್ನಿ ಸರೋಜಿನಿ (50) ಮೃತಪಟ್ಟಿದ್ದಾರೆ.

ಸಿಡಿಲಿನ ಆಘಾತದಿಂದ ಮನೆಯ ವಿದ್ಯುತ್ ತಂತಿಯಲ್ಲಿ ಒಮ್ಮೆಲೇ ಅಧಿಕ ಪ್ರಮಾಣದ ವಿದ್ಯುತ್‌ ಹರಿಯಿತು. ಇದರಿಂದ ಆಘಾತಕ್ಕೆ ಒಳಗಾಗಿ ಸರೋಜಿನಿ ಅವರು ಕುಸಿದು ಬಿದ್ದರು. ಅವರನ್ನು ಬದುಕಿಸಲು ತೆರಳಿದ ಸಂಜೀವ ಮೂಲ್ಯ ಅವರೂ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟರು.

ಶುಕ್ರವಾರ ಸಂಜೆ ಸುಬ್ರಹ್ಮಣ್ಯ ಸುತ್ತಮುತ್ತ ಸುಮಾರು ಅರ್ಧ ಗಂಟೆ ಹೊತ್ತು ಗುಡುಗು, ಮಿಂಚು, ಗಾಳಿಯಿಂದ ಕೂಡಿದ ಆಲಿಕಲ್ಲು ಮಳೆ ಸರಿಯಿತು. ಭಾರಿ ಮಳೆಯಿಂದಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಸುಳ್ಯ, ಪುತ್ತೂರು ಸುತ್ತಮುತ್ತ ಸಹ ಗಾಳಿಯಿಂದ ಕೂಡಿದ ಮಳೆ ಸುರಿಯಿತು.


Spread the love