ಕೊಡವೂರು ದೇವಳದಲ್ಲಿ ಸಾಮೂಹಿಕ ಗೋಪೂಜೆ 

Spread the love

ಕೊಡವೂರು ದೇವಳದಲ್ಲಿ ಸಾಮೂಹಿಕ ಗೋಪೂಜೆ 

ಉಡುಪಿ: ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಸಾಮೂಹಿಕ ಗೋಪೂಜೆ ನಡೆಯಿತು.

ಭಕ್ತಾದಿಗಳಿಗೆ ಸ್ವಹಸ್ತದಿಂದ ಗೋಮಾತೆಗೆ ಪೂಜೆ ಹಾಗೂ ಗೋಗ್ರಾಸ ನೀಡುವ ಅವಕಾಶ ಕಲ್ಪಿಸಲಾಯಿತು. ಗೋ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವಿತ್ತು. ಪೂಜೆಯಿಂದ ಸಂಗ್ರಹವಾದ ಕಾಣಿಕೆಯನ್ನು ನೀಲಾವರ ಗೋಶಾಲೆಗೆ ನೀಡಲಾಯಿತು .

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಸದಸ್ಯ ಜನಾರ್ದನ್ ಕೊಡವೂರು, ಅಡಿಗ ಕೃಷ್ಣಮೂರ್ತಿ, ಎ. ರಾಜ. ಸೇರಿಗಾರ, ಸುಧಾ ಎನ್ ಶೆಟ್ಟಿ, ಜನನಿ ಭಾಸ್ಕರ್ ಭಟ್ ಅಗ್ರಹಾರ , ಸರೋಜಿನಿ ಹಾಗು ಪ್ರದ್ಯೋತ ನಾವಡ ಉಪಸ್ಥಿತರಿದ್ದರು


Spread the love