ಕೊರೋನಾ ನಡುವೆ ಆಸ್ಪತ್ರೆಯಲ್ಲಿ ದೈನಂದಿನ ಜಪ-ಪಾರಾಯಣಾದಿ ಸಾಧನೆಯಲ್ಲಿ ತೊಡಗಿದ ಪುತ್ತಿಗೆ ಸ್ವಾಮೀಜಿ

Spread the love

ಕೊರೋನಾ ನಡುವೆ ಆಸ್ಪತ್ರೆಯಲ್ಲಿ ದೈನಂದಿನ ಜಪ-ಪಾರಾಯಣಾದಿ ಸಾಧನೆಯಲ್ಲಿ ತೊಡಗಿದ ಪುತ್ತಿಗೆ ಸ್ವಾಮೀಜಿ

ಉಡುಪಿ: ಕೊರೋನಾ ಪಾಸಿಟಿವ್ ದೃಢಗೊಂಡ ಹಿನ್ನಲೆಯಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆರೋಗ್ಯವಾಗಿದ್ದು ತಮ್ಮ ದೈನಂದಿನ ಜಪ-ಪಾರಾಯಣಾದಿ ಸಾಧನೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಠದ ಮೂಲಗಳು ತಿಳಿಸಿದೆ.

ಪುತ್ತಿಗೆ ಮಠದ ಸ್ವಾಮೀಜಿಗಳಿಗೆ ಜ್ವರದ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಈ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿತ್ತು. ಈ ಹಿನ್ನಲೆಯಲ್ಲಿ ಪುತ್ತಿಗೆ ಮಠವನ್ನು ಸೀಲ್ ಡೌನ್ ಮಾಡಲಾಗಿತ್ತು.

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ವಾಮೀಜಿ ಸಂಪೂರ್ಣ ಲವಲವಿಕೆಯಿಂದ ಇದ್ದು ದಿನನಿತ್ಯ ದೈನಂದಿನ ಜಪ-ಪಾರಾಯಣಾದಿ ಸಾಧನೆಯಲ್ಲಿ ತೊಡಗಿಕೊಂಡಿದ್ದು ಶ್ರೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.


Spread the love