ಕೊಲ್ಲೂರು ಇಬ್ಬರು ದರೋಡೆಕೋರರ ಬಂಧನ

Spread the love

ಕೊಲ್ಲೂರು ಇಬ್ಬರು ದರೋಡೆಕೋರರ ಬಂಧನ

ಕುಂದಾಪುರ: ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲೂರು ಪೋಲಿಸರು ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತರನ್ನು ಭಧ್ರಾವತಿಯ ಮೋಹನ ಕುಮಾರ್ (27) ಹಾಗೂ ನರೇಂದ್ರ ಬಾಬು ಬೆಂಗಳೂರು ಎಂದು ಗುರುತಿಸಲಾಗಿದೆ.

98-16-blog

ಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಲ್ಲೂರು –ಸಾಗರ ಹೆದ್ದಾರಿಯಲ್ಲಿ ಅಕ್ಟೋಬರ್ 20 ರಂದು ಬೆಳಿಗ್ಗೆ 09.45 ಗಂಟೆಗೆ ಉದಯ ಶೇರುಗಾರ ಎಂಬವರು ತನ್ನ ದ್ವಿಚಕ್ರ ವಾಹನದಲ್ಲಿ ಕೊಲ್ಲೂರು ಕಡೆಯಿಂದ ದಳಿ ಕಡೆಗೆ ಹೋಗುತ್ತಿರುವಾಗ್ಗೆ ಕೊಲ್ಲೂರು–ಸಾಗರ ಹೆದ್ದಾರಿಯದಳಿ ಎಂಬಲ್ಲಿ ಉದಯ ಶೇರುಗಾರ ರವರ ಹಿಂಬದಿಯಿಂದ ಇನ್ನೋವಾ ವಾಹನದಲ್ಲಿ ಬಂದ 6 ಮಂದಿಯಿದ್ದ ದರೋಡೆಕೋರರು ಉದಯ ಶೇರುಗಾರರನ್ನು ಅಡ್ಡಹಾಕಿ ನಿಲ್ಲಿಸಿಅವರನ್ನು ಸೇರಿ ಕೈಯಿಂದ ಮುಖಕ್ಕೆ, ಮೂಗಿಗೆ ಬೆನ್ನಿಗೆ ಹೊಡೆದು, ನಂತರ ಕಬ್ಬಿಣದ ರಾಡಿನಿಂದ ಉದಯ ಶೇರುಗಾರ ಎಡಕಾಲಿಗೆ ಏಕಾಏಕಿಯಾಗಿ ಹೊಡೆದು, ಕಣ್ಣಿಗೆ ಮೆಣಸಿನ ಪುಡಿ ಎರಚಿ ದ್ವಿಚಕ್ರವಾಹನದ ಕೀಯನ್ನು, ಅಂಗಿಯ ಕಿಸೆಯಲ್ಲಿದ್ದ ಮೊಬೈಲ್ 8 ಸಾವಿರ ರೂ. ಮೌಲ್ಯದ ಫೋನನ್ನು ಮತ್ತು ಕಿಸೆಯಲ್ಲಿದ್ದ ನಗದು 1000/ ರೂ. ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದು ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಆರೋಪಿತರ ಖಚಿತ ಮಾಹಿತಿಯನ್ನು ಪಡೆದ ಕೊಲ್ಲೂರು ಠಾಣಾ ಪಿ.ಎಸ್. ಐ ಮತ್ತು ಸಿಬ್ಬಂದಿರವರು ರಾತ್ರಿ ಅರೆಶಿರೂರಿನಲ್ಲಿ ದಸ್ತಗಿರಿ ಮಾಡಿ  ಕೃತ್ಯಕ್ಕೆ ಬಳಸಿದ ಮೂರು ಲಕ್ಷದ ಇನ್ನೋವಾ ಕಾರು KA-14-A-6593 ನೇ ನೊಂದಣಿ ಸಂಖ್ಯೆಯ ಸಿಲ್ವರ್ ಬಣ್ಣದ ಇನ್ನೋವಾ ಕಾರು, ಕಬ್ಬಿಣದ ರಾಡು ಇತ್ಯಾಧಿಗಳನ್ನು ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಆರೋಪಿಗಳಾದ  ಚಂದ್ರಕುಮಾರ ಯಾನೆ ಜಾಂಟಿ, ಜಾನಿ, ಸಿದ್ಧ, ನಾಗೇಶ ಹಾಗೂ ದರೋಡೆ ಕೃತ್ಯಕ್ಕೆ ಸಹಕರಿಸಿದವರನ್ನು ದಸ್ತಗಿರಿ  ಮಾಡುವ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಬಾಲಕೃಷ್ಣ ಕೆ.ಟಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರವರಾದ ವಿಷ್ಣುವರ್ಧನ್ ರವರ ನಿರ್ಧೇಶನದಂತೆ ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಪ್ರವೀಣ್ ಹೆಚ್, ನಾಯಕ್ ರವರ ಮತ್ತು ಬೈಂದೂರು ವೃತ್ತ ನಿರೀಕ್ಷಕರಾದ ರಾಘವ ಪಡೀಲ್ ರವರ  ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣಾ ಪಿಎಸ್,ಐ ಶೇಖರ, ಮತ್ತು ಸಿಬ್ಬಂದಿಗಳಾದ ಅಶೋಕ್ ಕುಮಾರ್, ನವೀನ ಕುಮಾರ್, ನವೀನ, ನಾಗರಾಜ ಮತ್ತಿತರರು  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.


Spread the love