ಕೊಳವೆ ದುರಸ್ತಿ ಕಾರ್ಯ; ಮೇ.30 ರಂದು ನೀರು ವಿತರಣೆ ಸ್ಥಗಿತ

Spread the love

ಕೊಳವೆ ದುರಸ್ತಿ ಕಾರ್ಯ; ಮೇ.30 ರಂದು ನೀರು ವಿತರಣೆ ಸ್ಥಗಿತ
ಮ0ಗಳೂರು :- ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆಯಿಂದ 18 ಎಂ.ಜಿ.ಡಿ. ನೀರನ್ನು ಪೂರೈಸುವ 900 ಎಂ.ಎಂ. ವ್ಯಾಸದ ಮುಖ್ಯ ಕೊಳವೆಯಲ್ಲಿ ಕೊಟ್ಟಾರ ಚೌಕಿ ಬಳಿ ಸೋರುವಿಕೆ ಉಂಟಾಗಿದ್ದು, ಸದ್ರಿ ಕೊಳವೆ ದುರಸ್ತಿ ಕಾರ್ಯವನ್ನು ಮೇ.30 ರಂದು ಪೂರ್ವಾಹ್ನ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಸದ್ರಿ ಅವಧಿಯಲ್ಲಿ ಮಂಗಳೂರು ನಗರ ಭಾಗಶ: ಪ್ರದೇಶ, ಕೋಡಿಕಲ್, ಕೊಟ್ಟಾರ ಜಲ್ಲಿಗುಡ್ಡ, ಕೂಳೂರು, ಪಣಂಬೂರು ಹಾಗೂ ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಎಂದು ಕಾರ್ಯಪಾಲಕ ಅಭಿಯಂತರರು, ವಿಭಾಗ-2, ಮಹಾನಗರಪಾಲಿಕೆ, ಮಂಗಳೂರು. ಇವರ ಪ್ರಕಟಣೆ ತಿಳಿಸಿದೆ.


Spread the love