ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಿ.ಜೆ.ಪಿಯಿಂದ ಅಮಾನತು

Spread the love

ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಿ.ಜೆ.ಪಿಯಿಂದ ಅಮಾನತು

ಉಡುಪಿ :- ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ರವರ ಹೆಸರು ಕೋಟ ಪೋಲಿಸ್ ಠಾಣಾ ವ್ಯಾಪ್ತಿಯ ಅವಳಿ ಕೊಲೆ ಪ್ರಕರಣದಲ್ಲಿ ಆರೋಪಿಯೆಂದು ಹೆಸರಿಸಲ್ಪಟ್ಟಿರುವುದರಿಂದ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾದ ಮಟ್ಟಾರ್ ರತ್ನಕಾರ ಹೆಗ್ಡೆಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಪಂ ಸದಸ್ಯನಾಗಿರುವ ರಾಘವೇಂದ್ರ ಕಾಂಚನ್ ಜೋಡಿ ಕೊಲೆಗಳ ಪ್ರಮುಖ ಆರೋಪಿ ರಾಜಶೇಖರ್ ರೆಡ್ಡಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಜ.23ರಂದು ಮೊಬೈಲ್ನಲ್ಲಿ ಸಂಭಾಷಣೆ ನಡೆಸಿದ್ದು, ಕೊಲೆ ನಡೆದ ಜ.26ರಂದು ಸಂಪರ್ಕ ಕಲ್ಪಿಸಿ ಸಂಭಾಷಣೆ ನಡೆಸಿದ ಬಗ್ಗೆ ವಿಚಾರಣೆ ವೇಳೆ ಬಯಲಾಗಿತ್ತು.

ಆರೋಪಿ ಜಿಪಂ ಸದಸ್ಯನನ್ನು ಪಕ್ಷದಿಂದ ಹಾಗೂ ಜಿಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ಕೂಡ ನಡೆದಿತ್ತು.


Spread the love