ಕ್ರೈಸ್ತ ಯುವಕನ ಮನೆಗೆ ನುಗ್ಗಿ ಕಾಂಗ್ರೇಸ್ ನಾಯಕನ ಹಲ್ಲೆ: ಕಾರ್ಣಿಕ್ ಖಂಡನೆ

Spread the love

ಕ್ರೈಸ್ತ ಯುವಕನ ಮನೆಗೆ ನುಗ್ಗಿ ಕಾಂಗ್ರೇಸ್ ನಾಯಕನ ಹಲ್ಲೆ: ಕಾರ್ಣಿಕ್ ಖಂಡನೆ

ಮೂಡಬಿದಿರೆ : ಮೂಡಬಿದಿರೆ ಬಳಿ ಕಲ್ಲಮುಂಡ್ಕೂರಿನ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಮೂಡಬಿದಿರೆ ಕಾಂಗ್ರೇಸ್ ನಾಯಕನ ಗುಂಡಾ ಪ್ರವೃತ್ತಿಯನ್ನು ವಿಧಾನಪರಿಷತ್ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಟುವಾಗಿ ಖಂಡಿಸಿದ್ದಾರೆ
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮೇಲೆ ಕಾಂಗ್ರೇಸ್ ನಾಯಕರ ದೌರ್ಜನ್ಯ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಾಂಗ್ರೇಸ್ ದುರಾಡಳಿತಕ್ಕೆ ಜನತೆ ಇತಿಶ್ರೀ ಹಾಡುವ ಕಾಲ ಸಮೀಪಿಸುತ್ತಿದೆ. ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಲ್ಲಿಪೋಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ಅಮಾಯಕನಿಗೆ ನ್ಯಾಯ ಒದಗಿಸುವ ದಿಟ್ಟತನ ಪ್ರದರ್ಶಿಸುವಂತೆ ಆಗ್ರಹಿಸಿದ್ದಾರೆ.


Spread the love