ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ರವರ ಎರಡು ಮಕ್ಕಳನ್ನು ಸಅದಿಯ್ಯದಿಂದ ದತ್ತು

Spread the love

ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ರವರ ಎರಡು ಮಕ್ಕಳನ್ನು ಸಅದಿಯ್ಯದಿಂದ ದತ್ತು

ಮಂಗಳೂರು: ಪೋಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ರವರ ಎರಡು ಮಕ್ಕಳನ್ನು ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ದತ್ತು ಪಡೆದಿದೆ.

ಮೃತರ ಮನೆಗೆ ಭೇಟಿ ನೀಡಿದ ಸಅದಿಯ್ಯ ಪ್ರಿನ್ಸಿಪಾಲ್ ಹಾಗೂ ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್ ಘೋಷಿಸಿದರು. ತಂಡದಲ್ಲಿ ಸುನ್ನೀ ಕೋಆರ್ಡಿನೇಶನ್ ಸಮಿತಿಯ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಕಾರ್ಯದರ್ಶಿ ಅಶ್ರಫ್ ಕಿನಾರ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಮತ್ತಿತರರು ಉಪಸ್ಥಿತರಿದ್ದರು.

ನಂತರ ಮತ್ತೋರ್ವ ಗುಂಡೇಟಿಗೆ ಬಲಿಯಾದ ನೌಶೀನ್ ರವರ ಮನೆಗೂ ಭೇಟಿ ಸಾಂತ್ವನ ಹೇಳಿದರು.


Spread the love