ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರ – ಸಂಚಾರ ಬಂದ್

Spread the love

ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರ – ಸಂಚಾರ ಬಂದ್

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಚಾರ್ಮಾಡಿಘಾಟ್ ನ 10 ನೇ ತಿರುವಿನಲ್ಲಿ ಘಟನೆ ನಡೆದಿದ್ದು, ಸಂಚಾರ ಬಂದ್ ಹಿನ್ನೆಲೆ ವಾಹನ ಸವಾರರ ಪರದಾಟ ಪಡುತ್ತಿದ್ದಾರೆ. ಸಂಚಾರ ಬಂದ್ ಆದ ಹಿನ್ನಲೆಯಲ್ಲಿ ಕಿ.ಮೀ ಗಟಲ್ಲೇ ಸಾಲುಕಟ್ಟಿ ನಿಂತಿರೋ ವಾಹನಗಳು ನಿಂತಿದ್ದು ಮಳೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ರಸ್ತೆಯಲ್ಲಿನ ಮರವನ್ನು ತೆರವು ಮಾಡಲು ಸ್ಥಳಕ್ಕೆ ಬಂದ ಸಮಾಜಸೇವಕ ಅಸನಬ್ಬ ಕಾರು ಮೇಲೂ ಬಿದ್ದ ಮತ್ತೊಂದು ಮರ ಅಸನಬ್ಬ ಪ್ರಾಣೋಪಾಯದಿಂದ ಪಾರಾಗಿದ್ದಾರೆ.


Spread the love