ಚಿತ್ರಾಪು ಬಿಲ್ಲವರ ಸಂಘದ 74 ನೇ ವಾರ್ಷಿಕ ಮಹಾಸಭೆ

Spread the love

ಚಿತ್ರಾಪು ಬಿಲ್ಲವರ ಸಂಘದ 74 ನೇ ವಾರ್ಷಿಕ ಮಹಾಸಭೆ

ಮುಂಬಯಿ : 74 ವರ್ಷಗಳ ಹಿಂದೆ ಚಿತ್ರಾಪು ಬಿಲ್ಲವ ಸಮುದಾಯದ ಹಿರಿಯರು ಬಹಳ ಪರಿಶ್ರಮದಿಂದ ಈ ಸಂಘವನ್ನು ಕಟ್ಟಿದ್ದು ನಾವಿಂದು ಅವರನ್ನು ನೆನಪಿಸಬೇಕಾಗಿದೆ. ಮಹಿಳೆಯರು ಬಹಳ ಸಂಖ್ಯೆಯಲ್ಲಿ ಇಂದು ಇಲ್ಲಿದ್ದು ಮುಂದೆ ಇದು ಹಲವು ಪಟ್ಟು ಹೆಚ್ಚಾಗಲಿ. ನಮ್ಮವರ ಮನೆಯಲ್ಲಿನ ಮಹಿಳೆಯರನ್ನು ಹಾಗೂ ಮಕ್ಕಳನ್ನು ಮಾತ್ರವಲ್ಲದೆ ಸಮಾಜ ಬಾಂಧವರನ್ನು ಚಿತ್ರಾಪು ಬಿಲ್ಲವರ ಸಂಘದ ಸದಸ್ಯರಾಗಿ ಮಾಡುದರೊಂದಿಗೆ ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸೋಣ ಎಂದು ಚಿತ್ರಾಪು ಬಿಲ್ಲವರ ಸಂಘದ ಅಧ್ಯಕ್ಷರಾದ ಜಿ. ಟಿ. ಪೂಜಾರಿ ನುಡಿದರು.

ಆ. 11 ರಂದು ನಗರದ ಬಿಲ್ಲವ ಭವನ, ನಾರಾಯಣ ಗುರು ಮಾರ್ಗ, ಸಂತಾಕ್ರೂಸ್ ಪೂರ್ವ ಇಲ್ಲಿ ಜರಗಿದ ಚಿತ್ರಾಪು ಬಿಲ್ಲವರ ಸಂಘ (ರಿ.) ಮುಂಬಯಿ ಇದರ 74ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಜಿ. ಟಿ. ಪೂಜಾರಿ ಯವರು ಯುವಕರು ಮುಂದೆ ಬಂದು ನಮ್ಮ ಈ ಸಂಘವನ್ನು ಉನ್ನತ ಮಟ್ಟಕ್ಕೇರಿಸಬೇಕೆಂದು ಹೇಳುತ್ತಾ ಶ್ರೀ ವಿಠೋಭ ದೇವರ ಆಶ್ರೀರ್ವಾದದಿಂದ ನಮಗೆ ಎಲ್ಲರ ಬೆಂಬಲವಿದೆ ಎಂದರು.

ಅಧ್ಯಕ್ಷರಾದ ಜಿ. ಟಿ. ಪೂಜಾರಿಯವರು ವೇದಿಕೆಯಲ್ಲಿದ್ದ ಇತರ ಪದಾಧಿಕಾರಿಗಳೊಂದಿಗೆ ಶ್ರೀ ವಿಠೋಭ ದೇವರ ಭಾವಚಿತ್ರಕ್ಕೆ ಮೊದಲು ದೀಪ ಬೆಳಗಿಸಿ ಮಹಾಸಭೆಗ ಚಾಲನೆಯಿತ್ತು ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಉಮೇಶ್ ಜಿ. ಕೋಟ್ಯಾನ್ ಗತ ಸಭೆಯ ವರದಿಯನ್ನು ಸಭೆಯ ಮುಂದಿಟ್ಟರೆ ಗೌರವ ಕೋಶಾಧಿಕಾರಿ ಸೋಮನಾಥ ಪಿ. ಪೂಜಾರಿಯವರು ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.

ಸಂಘದ ಮುಂದಿನ ಮೂರು ವರ್ಷದ ಅವಧಿಗೆ ಜಿ. ಟಿ. ಪೂಜಾರಿಯವರು ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಜಿ. ಕೋಟ್ಯಾನ್, ಗೌರವ ಕೋಶಾಧಿಕಾರಿಯಾಗಿ ಸೋಮನಾಥ ಪಿ. ಪೂಜಾರಿ, ಉಪಾಧ್ಯಕ್ಷರಾಗಿ ರಾಜು ಎಸ್. ಪೂಜಾರಿ, ಜೊತೆ ಕಾರ್ಯದರ್ಶಿಗಳಾಗಿ ನಿಶಿತ್ ಎಸ್. ಕೋಟ್ಯಾನ್ ಮತ್ತು ಮಧುಕಾರ್ ಆರ್ ಕೋಟ್ಯಾನ್, ಜೊತೆ ಕೋಶಾಧಿಕಾರಿಯಾಗಿ ಕಿಶೋರ್ ಎಸ್. ಕರ್ಕೇರ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುರೇಶ್ ಎಂ. ಕೋಟ್ಯಾನ್, ಪದ್ಮನಾಭ ಜೆ. ಪೂಜಾರಿ, ಜಯಶೀಲ ಕೋಟ್ಯಾನ್, ರಮೇಶ್ ಕೆ. ಕುಂದರ್, ವಿ. ಸಿ. ಸಾಲ್ಯಾನ್, ನವೀಶ್ ಜೆ. ಬಂಗೇರ, ಗಣೇಶ್ ಸಾಲ್ಯಾನ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಶೇಖರ ಜೆ. ಚಿತ್ರಾಪು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಿಧನರಾದ ಚಿತ್ರಾಪು ಬಿಲ್ಲವರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಟಿ. ಕುಕ್ಯಾನ್ ಅವರಿಗೆ ಸಂತಾಪ ಸೂಚಿಸಲಾಯಿತು.

ಸಭಿಕರ ಪರವಾಗಿ ಮಾತನಾಡಿದ ಸುಂದರ ಸುವರ್ಣ, ಭಾಸ್ಕರ ಎಸ್. ಕೋಟ್ಯಾನ್, ಸುರೇಶ್ ಎಂ. ಕೋಟ್ಯಾನ್, ಉಮೇಶ್ ಕೋಟ್ಯಾನ್, ರವಿ ಸನಿಲ್, ಸೋಮನಾಥ ಪಿ. ಪೂಜಾರಿಯವರು ನಾವೆಲ್ಲರೂ ಸಂಘದ ಮೇಲೆ ಪ್ರೀತಿಯಿಟ್ಟು ಸಂಘದ ಅಭಿವೃದ್ದಿಗಾಗಿ ದುಡಿಯಬೇಕಾಗಿದೆ ಎನ್ನುತ್ತಾ ಅಗಲಿದ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದಿ. ರಾಮಚಂದ್ರ ಟಿ. ಕುಕ್ಯಾನ್ ಅವರ ಸೇವೆಯನ್ನು ಸ್ಮರಿಸಿದರು.

ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸಂಘದ ಸಾಧಕರಾದ ಸುರೇಶ್ ಎಂ. ಕೋಟ್ಯಾನ್, ಶ್ರೀಮತಿ ರಾಧಾ, ಪದ್ಮನಾಭ ಜೆ. ಪೂಜಾರಿ ದಂಪತಿಯನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯರನ್ನು ಈ ಸಭೆಯಲ್ಲಿ ಗೌರವಿಸಲಾಯಿತು. ಚಿತ್ರಾಪು ಬಿಲ್ಲವರ ಸಂಘದ ನೂತನ ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ್ ಜಿ. ಕೋಟ್ಯಾನ್ ಕೊನೆಯಲ್ಲಿ ಧನ್ಯವಾದವಿತ್ತರು.


Spread the love