ಚೆನ್ನಗಿರಿ: ಬಸ್ಸು ಮಗುಚಿ ಬಿದ್ದು ಮೂರು ಸಾವು; 25 ಕ್ಕೂ ಅಧಿಕ ಮಂದಿಗೆ ಗಾಯ

Spread the love

ಚೆನ್ನಗಿರಿ: ಸಂತೆ ಬೆನ್ನೂರು ಬಳಿ ಬಸ್ ಮಗುಚಿ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಚೆನ್ನಗಿರಿ ಗೀತಾಂಜನೇಯ  ಎಂಬ ಹೆಸರಿನ   ಖಾಸಗಿ ಬಸ್ಸು, ಸಂತೆಬೆನ್ನೂರು ಮಾರ್ಗವಾಗಿ ದಾವಣಗೆರೆಗೆ ವೇಗವಾಗಿ ಹೋಗುತ್ತಿದ್ದ ವೇಳೆ ಚೆನ್ನಗಿರಿ ಬಸ್ಸು ನಿಲ್ದಾಣದಕ್ಕೆ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು,  ಸ್ಥಳದಲ್ಲೇ 3 ಪ್ರಯಾಣಿಕರು ಮೃತಪಟ್ಟಿದ್ದು 25ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 


Spread the love