ಜನತಾದಳ( ಜಾತ್ಯಾತೀತ) ನೂತನ ಜಿಲ್ಲಾ ಕಛೇರಿ ಆರಂಭ

Spread the love

ಜನತದಳ( ಜಾತ್ಯಾತೀತ) ನೂತನ ಜಿಲ್ಲಾ ಕಛೇರಿ ಆರಂಭ

ಉಡುಪಿ: ಜಿಲ್ಲಾ, ಜನತದಳ( ಜಾತ್ಯಾತೀತ) ನೂತನ ಜಿಲ್ಲಾ ಕಛೇರಿ ಕೃಷ್ಣಗ್ಯಾಸ್ ಎಜೆನ್ಸಿ ಎದುರು ಹಳೆ ಕಿನ್ನಿಮುಲ್ಕಿ ರಸ್ತೆ ಉಡುಪಿ, ಇಲ್ಲಿ ಪೂಜಾ ವಿಧಿವಿಧಾನ ನೆರವೇರಿಸುವುದರೊಂದಿಗೆ ಆರಂಭಗೊಂಡಿತು.

ಮುಂದಿನ ದಿನಗಳಲ್ಲಿ ಜೆ.ಡಿ.ಎಸ್ ವರಿಷ್ಠರಾದ ಮಾಜಿ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಎಚ್.ಡಿ. ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರಾದ ಎಚ್.ಡಿ ಕುಮಾರಸ್ವಾಮಿ ಹಾಗೂ ರಾಜ್ಯಮಟ್ಟದ ನಾಯಕರುಗಳು, ಉಡುಪಿ ಜಿಲ್ಲೆಗೆ ಆಗಮಿಸಿ ವಿದ್ಯುಕ್ತವಾಗಿ ಉಡುಪಿ ಜಿಲ್ಲಾ ಜೆ.ಡಿ.ಎಸ್ ಕಾರ್ಯಾಲಯವನ್ನು ಉದ್ಘಾಟಿಸಲಿದ್ದು ಮತ್ತು ಜಿಲ್ಲಾ ಮಟ್ಟದ ಸಮಾವೇಶವನ್ನು ಪೆಬ್ರವರಿ ತಿಂಗಳಲ್ಲಿ ನಡೆಸಲಾಗುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಯೋಗೀಶ್.ವಿ.ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಈ ವೇಳೆ ಜಿಲ್ಲಾಧ್ಯಕ್ಷರಾದ ಯೋಗೀಶ್.ವಿ.ಶೆಟ್ಟಿ, ಮಾಜಿ ಅಧ್ಯಕ್ಷರಾದ ದಕ್ಷತ್.ಆರ್.ಶೆಟ್ಟಿ, ಕಾರ್ಯಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಅಡಿಗರು, ಗಂಗಾಧರ್ ಬಿರ್ತಿ, ಜಯಕುಮಾರ್ ಪರ್ಕಳ, ಸುಧಾಕರ್ ಶೆಟ್ಟಿ ಹೆಜಮಾಡಿ, ಸೈಯದ್ ಸಾಹಿಬ್, ಉದಯ ಹೆಗ್ಡೆ, ರೋಹಿತ್ ಕರಂಬಳ್ಳಿ, ಜಯರಾಮ್ ಆಚಾರ್ಯ, ಅಬ್ದುಲ್ ರಜಾಕ್ ಉಚ್ಚಿಲ, ಶಾಲಿನಿ ಕೆಂಚನೂರು, ವಿಶಾಲಾಕ್ಷಿ.ಆರ್.ಶೆಟ್ಟಿ ಉಡುಪಿ, ಚಂದ್ರಹಾಸ್ ಎರ್ಮಾಳ್, ವೆಂಕಟೇಶ್ ಪಡುಬಿದ್ರೆ, ಇಸ್ಮಾಯಿಲ್ ಪಲಿಮಾರು, ಪ್ರದೀಪ್ ಜಿ, ಉದಯ ಶೆಟ್ಟಿ ಕಾಪು, ಹಾಗೂ ಇನ್ನಿತರು ಉಪಸ್ಥಿತರಿದ್ದರು.


Spread the love