ಜನತಾ ಕರ್ಫ್ಯೂ ಯಶಸ್ವಿಗೊಳಿಸೋಣ- ಶರಣ್ ಪಂಪ್ವೆಲ್

Spread the love

ಜನತಾ ಕರ್ಫ್ಯೂ ಯಶಸ್ವಿಗೊಳಿಸೋಣ- ಶರಣ್ ಪಂಪ್ವೆಲ್

ಮಂಗಳೂರು: ದೇಶದ ಹಿತ ದೃಷ್ಟಿಯಿಂದ   ಪ್ರಧಾನ ಮಂತ್ರಿಯವರು  ಕೊರೊನಾ ವೈರಸ್‌ ಅನ್ನು ಎದುರಿಸಲು ನೀಡಿರುವ “ಜನತಾ ಕರ್ಫ್ಯೂ” ಕರೆಗೆ ಸ್ವಯಂ ‌ಸಂಕಲ್ಪ ಹಾಗೂ ಸಂಯಮದಿಂದ  ಸೋಂಕು ಹರಡುವುದನ್ನು ತಡೆಯಲು  ಸಾರ್ವಜನಿಕರು ಸಹಕರಿಸುವಂತೆ ವಿಶ್ವ ಹಿಂದೂ ಪರಿಷತ್ ನ ಶರಣ್ ಪಂಪ್ ವೆಲ್ ವಿನಂತಿಸಿದ್ದಾರೆ.

ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು  ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 22 ಆದಿತ್ಯವಾರದಂದು ಕರೆ ನೀಡಿರುವ ಜನತಾ ಕರ್ಫ್ಯೂವನ್ನು ಯಶಸ್ವಿಗೊಳಿಸಲು ವಿಶ್ವ ಹಿಂದೂ ಪರಿಷತ್ತಿನ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು. ಆದಿತ್ಯವಾರ ನಿಗದಿಯಾದ ಎಲ್ಲಾ ಬೈಠಕ್ ಕಾರ್ಯಕ್ರಮಗಳನ್ನು ಮುಂದೂಡಿ ಗ್ರಾಮ , ಹಳ್ಳಿ ಹಾಗೂ ನಗರಗಳಲ್ಲಿ ನಮ್ಮ ಸಂಘಟನೆಯ ಕಾರ್ಯಕರ್ತರ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಿ ಜನತಾ ಕರ್ಫ್ಯೂವನ್ನು ಯಶಸ್ವಿಗೊಳಿಸೋಣ, ಮಾತ್ರವಲ್ಲದೆ  ಜನರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ  ಆದಿತ್ಯವಾರ ಸಂಜೆ 5.00 ಗಂಟೆಗೆ ನಮ್ಮ ನಮ್ಮ ಮನೆಗಳಲ್ಲಿ ಧನ್ಯವಾದವನ್ನು ಅರ್ಪಿಸೋಣ,ಹಾಗೂ ಅವರ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love