ಜಿಲ್ಲಾಡಳಿತ ವತಿಯಿಂದ ಬೀಡಿನ ಗುಡ್ಡೆಯಲ್ಲಿ ಕುಂದಾಪುರದ ಕೊರೋನ ಸೋಂಕಿತ ಮೃತವ್ಯಕ್ತಿಯ ಅಂತ್ಯಕ್ರಿಯೆ

Spread the love

ಜಿಲ್ಲಾಡಳಿತ ವತಿಯಿಂದ ಬೀಡಿನ ಗುಡ್ಡೆಯಲ್ಲಿ ಕುಂದಾಪುರದ ಕೊರೋನ ಸೋಂಕಿತ ಮೃತವ್ಯಕ್ತಿಯ ಅಂತ್ಯಕ್ರಿಯೆ

ಉಡುಪಿ : ಗುರುವಾರ ಮಣಿಪಾಲ ಕೆಎಂಸಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಸೋಂಕಿಗೆ ಪಾಸಿಟಿವ್ ಆದ ಮಹಾರಾಷ್ಟ್ರದ ಮುಂಬೈಯಿಂದ ಕಳೆದ ಬುಧವಾರ ಬಂದ ಕುಂದಾಪುರ ತಾಲೂಕಿನ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಇಂದು ಜಿಲ್ಲಾಡಳಿತದ ವತಿಯಿಂದ ನಗರದ ಬೀಡಿನಗುಡ್ಡೆಯಲ್ಲಿ ನೆರವೇರಿಸಲಾಯಿತು.

54ರ ಹರೆಯದ ಮೃತವ್ಯಕ್ತಿಯೊಂದಿಗೆ ಮುಂಬೈಯಿಂದ ಬಂದಿದ್ದ ಪತ್ನಿ, ಇಬ್ಬರು ಮಕ್ಕಳು ಹಾಗೂ ಸಂಬಂಧಿಯೊಬ್ಬರು ಉದ್ಯಾವರ ಎಸ್ಡಿಎಂನಲ್ಲಿ ಕ್ವಾರಂಟೈನ್ನಲ್ಲಿದ್ದು, ಮೃತವ್ಯಕ್ತಿ ಕಡೆಯಿಂದ ಹಾಗೂ ಪತ್ನಿ ಕಡೆಯಿಂದ ಯಾರು ಸಹ ಅಂತ್ಯಕ್ರಿಯೆ ನಡೆಸಲು ಮುಂದೆ ಬರಲಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಹೀಗಾಗಿ ಪತ್ನಿ, ಮಕ್ಕಳು ಸೇರಿದಂತೆ ನಿಕಟ ಸಂಬಂಧಿಗಳಿಂದ ಲಿಖಿತ ಒಪ್ಪಿಗೆಯನ್ನು ಪಡೆದು ಅವರ ಅಂತ್ಯಕ್ರಿಯೆಯನ್ನು ಇಂದು ಅಪರಾಹ್ನ 2:30ಕ್ಕೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.


Spread the love