ಜಿಲ್ಲಾ ಕಾರಾಗೃಹದಲ್ಲಿ ಹೊಸ ಕೈದಿಗೆ ವಿಚಾರಾಣಾಧೀನ ಕೈದಿಗಳಿಂದ ಹಲ್ಲೆ

Spread the love

ಜಿಲ್ಲಾ ಕಾರಾಗೃಹದಲ್ಲಿ  ಹೊಸ ಕೈದಿಗೆ ವಿಚಾರಾಣಾಧೀನ ಕೈದಿಗಳಿಂದ ಹಲ್ಲೆ

ಉಡುಪಿ: ಹೊಸ ಕೈದಿಗೆ ವಿಚಾರಾಣಾಧೀನ ಕೈದಿಗಳು ಹಲ್ಲೆ ನಡೆಸಿದ ಘಟನೆ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ನವೆಂಬರ್ 27 ರ ರಾತ್ರಿ ಸಂಭವಿಸಿದೆ.

ನವೆಂಬರ್ 26 ರಂದು ರಾತ್ರಿ ಉಡುಪಿ ಜಿಲ್ಲಾ ಕಾರಾಗೃಹಕ್ಕೆ ಹೊಸದಾಗಿ ವಿಚಾರಣಾಧೀನ ಕೈದಿಯಾಗಿ ಸೇರ್ಪಡೆಯಾದ ಇರ್ಷಾದ್‌ ಮೊಯಿದಿನ್‌ ಎಂಬುವವರು ನವೆಂಬರ್ 27 ರಂದು ಬೆಳಿಗ್ಗೆ 09:30 ಗಂಟೆಯಿಂದ 10:00 ಗಂಟೆಯ ನಡುವಿನ ವೇಳೆಯಲ್ಲಿ ತನ್ನನ್ನು ಇರಿಸಿದ ಒಂದನೇ ಬ್ಯಾರಕ್‌ನಿಂದ ತಿಂಡಿ ತಿನ್ನಲು ಅಡುಗೆ ಕೋಣೆ ಕಡೆಗೆ ಹೋಗುವಾಗ ಅದೇ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಸುದೀಪ್‌ ಶೆಟ್ಟಿ, ಅಖಿಲೇಶ್‌ ಶೆಟ್ಟಿ , ಸುಕುಮಾರ, ಮಂಜೇಶ್‌, ಪ್ರತೀಕ್‌, ಪ್ರಶಾಂತ ಮೊಗವೀರ ಎಂಬುವವರು ಒಟ್ಟು ಸೇರಿ ಅಕ್ರಮವಾಗಿ ಅಡ್ಡಗಟ್ಟಿ ತಡೆದು ಕೈಗಳಿಂದ ಹೊಡೆದುದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.

ಈ ಕುರಿತು ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

1 Comment

Comments are closed.