ಜ.26: ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ, ತೊಟ್ಟಂ ವತಿಯಿಂದ ಬೃಹತ್ ರಕ್ತದಾನ ಶಿಬಿರ

Spread the love

ಜ.26: ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ, ತೊಟ್ಟಂ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಉಡುಪಿ: ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ, ತೊಟ್ಟಂ ಇವರ ನೇತೃತ್ವದಲ್ಲಿ ಶ್ರೀ ಗಜಾನನ ಯಕ್ಷಗಾನ ಕಲಾಸಂಘ ತೊಟ್ಟಂ, ರಕ್ತ ನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಯೋಗದೊಂದಿಗೆ ಜನವರಿ 26 ರಂದು ಬೆಳಿಗ್ಗೆ 9 ಗಂಟೆಯಿಂದ 2 ಗಂಟೆಯ ವರೆಗೆ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಶ್ರೀ ಗಜಾನನ ಯಕ್ಷಗಾನ ಕಲಾ ಸಂಘ ತೊಟ್ಟಂ ಇಲ್ಲಿ ಆಯೋಜಿಸಲಾಗಿದೆ.

ಶಿಬಿರವನ್ನು ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ, ತೊಟ್ಟಂ ಇದರ ಗೌರವಾಧ್ಯಕ್ಷರು ಹಾಗೂ ಸಂತ ಅನ್ನಮ್ಮ ಚರ್ಚ್ ತೊಟ್ಟಂ ಇದರ ಧರ್ಮಗುರು ವಂ|ಡೆನಿಸ್ ಡೆಸಾ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಗಜಾನನ ಯಕ್ಷಗಾನ ಕಲಾ ಸಂಘ ಬಡಾನಿಡಿಯೂರು ತೊಟ್ಟಂ ಇದರ ಅಧ್ಯಕ್ಷರಾದ ಶಶಿಧರ ಎಂ ಅಮೀನ್ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆ ಉಡುಪಿ ಇದರ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ವೀಣಾ ಕುಮಾರಿ ಎಂ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ, ತೊಟ್ಟಂ ಇದರ ಅಧ್ಯಕ್ಷರಾದ ರಮೇಶ್ ಎಸ್ ತಿಂಗಳಾಯ ಗೌರವ ಉಪಸ್ಥಿತಿ ಹೊಂದಲಿದ್ದಾರೆ.

ರಕ್ತದಾನ ಶಿಬಿರದಲ್ಲಿ ಶ್ರೀ ಭಕ್ತಿ ಉದಯ ಪಂಡರಿನಾಥ ಭಜನಾ ಮಂದಿರ ತೊಟ್ಟಂ, ಜೀವ ಸಂಜೀವಿನಿ ರಕ್ತದಾನ ಬಳಗ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ತೊಟ್ಟಂ, ಶ್ರೀ ಪಂಡರಿನಾಥ ವಿಠೋಬ ಭಜನಾ ಮಂದಿರ, ಬಡಾನಿಡಿಯೂರು, ಜಾಮೀಯಾ ಮಸೀದಿ, ಮಲ್ಪೆ, ಶ್ರೀ ನಾರಾಯಣ ಗುರು ಬಿಲ್ಲವ ಸಂಘ, ಬಡಾನಿಡಿಯೂರು, ರಿಕ್ಷಾ ನಿಲ್ದಾಣ, ಬಡನಿಡಿಯೂರು ಸೇರಿದಂಥೆ ಸ್ಥಳೀಯ ಇತರ ಸಂಘಸಂಸ್ಥೆಗಳು ಸಹಕಾರ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love