ಟಿಪ್ಪು ಹುತಾತ್ಮನಾಗಿದ್ದರೆ ಬಾಬರ್, ಔರಂಗಾಜೇಬ್, ಗಜನಿ ಮಹಮ್ಮದ್ ಆಕ್ರಮಣಕಾರರು ಏನು – ಹಿಂದೂ ಜನಜಾಗೃತಿ ಸಮಿತಿ ಪ್ರಶ್ನೆ

Spread the love

ಟಿಪ್ಪು  ಹುತಾತ್ಮನಾಗಿದ್ದರೆ ಬಾಬರ್, ಔರಂಗಾಜೇಬ್, ಗಜನಿ ಮಹಮ್ಮದ್ ಆಕ್ರಮಣಕಾರರು ಏನು – ಹಿಂದೂ ಜನಜಾಗೃತಿ ಸಮಿತಿ ಪ್ರಶ್ನೆ

ಮಂಗಳೂರು: ಲಕ್ಷಗಟ್ಟಲೆ ಹಿಂದೂಗಳನ್ನು ಕ್ರೂರವಾಗಿ ಹತ್ಯೆಗೈದ ಮತ್ತು ಸಾವಿರಾರು ಸ್ತ್ರೀಯರ ಮೇಲೆ ಬಲಾತ್ಕಾರ ಮಾಡಿದ ಕ್ರೂರಿ ಟಿಪ್ಪು ಸುಲ್ತಾನನು ಆಂಗ್ಲರೊಂದಿಗೆ ಹೋರಾಡಿದ ಸ್ವಾತಂತ್ರ್ಯ ಸೇನಾನಿ ಮತ್ತು ಹುತಾತ್ಮ ಅಲ್ಲ, ಹಿಂದೂ ರಾಜರಿಂದ ಕಸಿದುಕೊಂಡ ಮೈಸೂರು ರಾಜ್ಯವನ್ನು ಬಿಡಿಸಲು ಅವನು ಆಂಗ್ಲರೊಂದಿಗೆ ಹೋರಾಡಿದ್ದನು. ಅವನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಹೀಗಿರುವಾಗ ಟಿಪ್ಪುಗೆ ಹುತಾತ್ಮ ಎನ್ನುವುದು ಹೇಗೆ ಸರಿ? ಆತ ಹುತಾತ್ಮ ಮತ್ತು ಸ್ವಾತಂತ್ರ್ಯಸೈನಿಕನಾಗಿದ್ದರೆ ಬಾಬರ್, ಔರಂಗಜೇಬ್, ಅಫ್ಝಲಖಾನ್, ಗಜನಿ ಮಹಮ್ಮದ ಇವರಂತಹ ಆಕ್ರಮಣಕಾರರು ಯಾರಾಗಿದ್ದರು ? ಅಥವಾ ಅವರು ಸಹ ಸ್ವಾತಂತ್ರ್ಯ ಸೇನಾನಿಗಳೇ ? ರಾಜ್ಯ ಕಾಂಗ್ರೆಸ್ ಸರಕಾರ ಮುಸಲ್ಮಾನರ ಮತಗಳ ಲಾಲಸೆಯಿಂದ ಸುಳ್ಳು ಹಾಗೂ ಕಪೋಲಕಲ್ಪಿತ ಇತಿಹಾಸವನ್ನು ಮಂಡಿಸಿ ಕ್ರೂರಿ ಟಿಪ್ಪುವಿನ ವೈಭವೀಕರಣ ಮಾಡುತ್ತಿರುವ ಬಗ್ಗೆ ಕೇಂದ್ರದ ಸಲಹೆಗಾರ ಮಂತ್ರಿಪರಿಷತ್ತು ರಾಷ್ಟ್ರಪತಿಗಳಿಗೆ ಏಕೆ ತಿಳಿಸಲಿಲ್ಲ  ಎಂದು ಹಿಂದೂ ಜನಜಾಗೃತಿ ಸಮಿತಿ ಪ್ರಶ್ನಿಸಿದೆ

ವಾಸ್ತವದಲ್ಲಿ ರಾಷ್ಟ್ರಪತಿಗಳ ಹೇಳಿಕೆ ರಾಷ್ಟ್ರದ ಹೇಳಿಕೆಯಾಗಬೇಕಿತ್ತು. ಅದಕ್ಕಾಗಿ ಹೆಚ್ಚು ಜವಾಬ್ದಾರಿಯಿಂದ ಮತ್ತು ಅಧ್ಯಯನಪೂರ್ಣವಾಗಿ ಹೇಳಿಕೆ ನೀಡುವುದು ರಾಷ್ಟ್ರಪತಿಗಳ ಜವಾಬ್ದಾರಿಯಾಗಿದೆ. ಟಿಪ್ಪುವಿನ ಹಿಂದೂದ್ವೇಷಿ ಮತ್ತು ರಕ್ತರಂಜಿತ ಇತಿಹಾಸವನ್ನು ಕೋವಿಂದರವರು ಎಂದೂ ಓದದೇ ಅವನನ್ನು ಹುತಾತ್ಮ ಎನ್ನುವುದು ಎಲ್ಲ ರೀತಿಯಿಂದಲೂ ಅಯೋಗ್ಯವಾಗಿದೆ.

ವಾಸ್ತವದಲ್ಲಿ ಟಿಪ್ಪು ಸುಲ್ತಾನನು ದಕ್ಷಿಣದಲ್ಲಿ ಅಧಿಕಾರವನ್ನು ಕೈಗೆತ್ತಿಕೊಳ್ಳುತ್ತಲೇ ‘ಎಲ್ಲ ಕಾಫೀರರನ್ನು (ಹಿಂದೂಗಳನ್ನು) ಮುಸಲ್ಮಾನರನ್ನಾಗಿಸುವೆನು’, ಎಂಬ ಪ್ರತಿಜ್ಞೆಯನ್ನು ತುಂಬಿದ ಸಭೆಯಲ್ಲಿ ಮಾಡಿದ್ದನು. ಅವನು ಗ್ರಾಮಗ್ರಾಮದ ಮುಸಲ್ಮಾನರಿಗೆ ಲಿಖಿತವಾಗಿ, ‘ಎಲ್ಲ ಹಿಂದೂ ಸ್ತ್ರೀ-ಪುರುಷರಿಗೆ ಇಸ್ಲಾಮಿ ದೀಕ್ಷೆ ನೀಡಿ, ಸ್ವೇಚ್ಛೆಯಿಂದ ಮತಾಂತರವಾಗದ ಹಿಂದೂಗಳಿಗೆ ಬಲವಂತವಾಗಿ ಮುಸಲ್ಮಾನರನ್ನಾಗಿಸಿ ಅಥವಾ ಹಿಂದೂ ಪುರುಷರಿಗೆ ಸಾಯಿಸಿ ಮತ್ತು ಅವರ ಸ್ತ್ರೀಯರನ್ನು ಮುಸಲ್ಮಾನರಲ್ಲಿ ಹಂಚಿರಿ’, ಎಂದಿದ್ದನು. ಮುಂದೆ ಟಿಪ್ಪು ಮಲಬಾರ ಪ್ರದೇಶದ ಒಂದು ಲಕ್ಷ ಹಿಂದೂಗಳನ್ನು ಮತಾಂತರಿಸಿದನು. ಕರ್ನಾಟಕದ ಮೇಲೆ ದಂಡೆತ್ತಿ ಬಂದಾಗ ಅವನು ಒಂದೇ ದಿನದಲ್ಲಿ ೫೦ ಸಾವಿರ ಹಿಂದೂಗಳನ್ನು ಮತಾಂತರಿಸಿದನು. ಅವನು ಹಿಂದೂಗಳ ಮತಾಂತರಕ್ಕಾಗಿ ಕೆಲವು ಕಟು ಮುಸಲ್ಮಾನರ ವಿಶೇಷ ಗುಂಪುಗಳನ್ನು ಮಾಡಿದ್ದನು. ಆಕ್ರಮಣಕಾರಿ ಇಸ್ಲಾಮಿ ಪ್ರಚಾರ ಮಾಡಿದ್ದರಿಂದ ದೇಶ-ವಿದೇಶಗಳಲ್ಲಿನ ಮುಸಲ್ಮಾನರು ಮತ್ತು ತುರ್ಕಸ್ಥಾನದ ಖಲೀಫಾದಿಂದ ಅತನಿಗೆ ‘ಸುಲ್ತಾನ’, ‘ಗಾಝಿ’, ‘ಇಸ್ಲಾಮ್‌ನ ಕರ್ಮವೀರ’ ಮುಂತಾದ ಬಿರುದುಗಳು ದೊರೆತಿದ್ದವು. ಇವೆಲ್ಲ ಕ್ರೌರ್ಯಪೂರ್ಣ ಇತಿಹಾಸವನ್ನು ರಾಷ್ಟ್ರಪತಿ ಮಹೋದಯರು ಓದಬೇಕೆಂದು ಹಿಂದೂ ಸಮಾಜವು ಬಯಸುತ್ತದೆ !


Spread the love