ಟೀಂ ಬಿ ಹ್ಯೂಮನ್ ಮತ್ತು ಎನ್ ಎಮ್ ಸಿ ಮೈದಾನ ಇವರಿಂದ ಹಸಿದವರಿಗೆ ಊಟ

Spread the love

ಟೀಂ ಬಿ ಹ್ಯೂಮನ್ ಮತ್ತು ಎನ್ ಎಮ್ ಸಿ ಮೈದಾನ ಇವರಿಂದ ಹಸಿದವರಿಗೆ ಊಟ

ಮಂಗಳೂರು: ಕೊರೊನಾ ಇಡೀ ಜಗತ್ತನ್ನೇ ಹೆದರಿಸಿ ಮುದುಡಿ ಕುಳಿತುಕೊಳ್ಳುವಂತೆ ಮಾಡಿದೆ. ಅದರ ಪರಿಣಾಮ ಸರ್ಕಾರ ಸಂಪೂರ್ಣ ಲಾಕ್ ಡೌನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಟೀಂ ಬಿ ಹ್ಯೂಮನ್ ಮತ್ತು ಎನ್ ಎಮ್ ಸಿ ಮೈದಾನ ಇವರು ಹಸಿದವರಿಗೆ ಊಟ ನೀಡಿದರು

ಮಾರ್ಚ್ 22 ರಿಂದ ಪ್ರತೀ ನಿತ್ಯ ಉತ್ತಮ ಗುಣಮಟ್ಟದ ಆಹಾರ ತಯಾರಿಸಿ ದಿನಕ್ಕೆ 2 ಬಾರಿ ನಗರದಾದ್ಯಂತ ಹಸಿವಿನಿಂದ ಚಡ ಪಡಿಸುತ್ತಿರು ಜೀವಕ್ಕೆ ತಂಪು ನೀಡಿದೆ.

ಬೀದಿ ನಿವಾಸಿಗಳು, ಕೂಲಿ ಕಾರ್ಮಿಕರು, ಜೊತೆಗೆ ಅಲ್ಲಲ್ಲಿ ಮನೆಗಳಲ್ಲಿ ಫ್ಲಾಟ್ ಗಳಲ್ಲಿ ಸಿಕ್ಕಿ ಹಾಕಿಕೊಂಡ ತಮಿಳು ನಾಡು ಕೇರಳ ಮುಂಬೈನವರಿಗೆ ಕೂಡಾ ಜಾತಿ ಮತ ಧರ್ಮ ಎಲ್ಲವನ್ನೂ ಮೀರಿ ಆಹಾರ ನೀಡುತ್ತಿದೆ.

ವ್ಯಾಪಕ ಒತ್ತಡದಲ್ಲಿ ಕಾರ್ಯ ನಿರ್ಬಹಿಸುವ ಪೋಲಿಸು ಸಿಬ್ಬಂದಿಗಳಿಗೆ ಟೀ ಬಿಸ್ಕಿತ್ ನೀಡುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಿರುವ ಜನರಿಗೆ ಹೀಗೆ ತನ್ನ ಸೇವೆಯನ್ನು ವಿಶಾಲ ತಳಹದಿಯಲ್ಲಿ ಮಾಡುತ್ತಿದೆ. ಇದಕ್ಕಾಗಿ ನೂರಾರು ಕಾರ್ಯಕರ್ತರು ದಿನವಿಡಿ ಕೆಲಸ ಮಾಡುತ್ತಿರಿವುದು ಅಭಿನಂದನೀಯ.


Spread the love