ಟೀಮ್ ವೀರಾಂಜನೇಯ ಫರಂಗಿಪೇಟೆ ವತಿಯಿಂದ ಸ್ವಾತಂತ್ರ ದಿನಾಚರಣೆ ಹಾಗೂ ರಕ್ಷಾ ಬಂಧನ 

Spread the love

ಟೀಮ್ ವೀರಾಂಜನೇಯ ಫರಂಗಿಪೇಟೆ ವತಿಯಿಂದ ಸ್ವಾತಂತ್ರ ದಿನಾಚರಣೆ ಹಾಗೂ ರಕ್ಷಾ ಬಂಧನ 

ಟೀಮ್ ವೀರಾಂಜನೇಯ ಫರಂಗಿಪೇಟೆ ವತಿಯಿಂದ 73ನೇ ಸ್ವಾತಂತ್ರ ದಿನಾಚರಣೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ಬಾಲ ಸಂರಕ್ಷಣಾ ಕೇಂದ್ರ ಕುತ್ತಾರ್ ರಲ್ಲಿ ಅರ್ಥ ಪೂರ್ವಕವಾಗಿ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲ ಸಂರಕ್ಷಣಾ ಕೇಂದ್ರ ಕುತ್ತಾರ್ ಸಂಚಾಲಕರಾದ ಬಾಲಕೃಷ್ಣ ಭಟ್ ವಹಿಸಿದರು.

ದೇವ ಸ್ವರೂಪರಾದ ಮಕ್ಕಳ ಪ್ರಾರ್ಥನೆ ಮೂಲಕ 73ನೇ ಸ್ವಾತಂತ್ರ ದಿನಾಚರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮ ಶುರು ಗೊಂಡಿತು ನಂತರ ಅಧ್ಯಕ್ಷತೆಯನ್ನು ವಹಿಸಿದಂತಹ ಆಶ್ರಮದ ಸಂಚಾಲಕರದಂತಹ ಡಾ. ಅನಂತ ಕೃಷ್ಣ ಭಟ್ ನೆರೆದಿದ್ದ ಸರ್ವರಿಗೂ ಹಿತ ನುಡಿಗಳನ್ನು ನೀಡಿದರು.

ಅರುಣಚಲ್ ಪ್ರದೇಶ್, ಮೇಘಾಲಯ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ, ಕೇರಳ ಹಾಗೂ ಇನ್ನಿತರ ರಾಜ್ಯಗಳ ಬಾಲಕ-ಬಾಲಕಿಯರ ಬಾಲ ಸಂರಕ್ಷಣಾ ಕೇಂದ್ರದಲ್ಲಿದ್ದು ನಿಮ್ಮ ರಕ್ಷಣೆ ಹಾಗೂ ಸಂರಕ್ಷಣೆಗೆ ನಾವು ಸದಾ ಬದ್ಧ ಎಂಬ ಆಶಯದಿಂದ ರಕ್ಷಾಬಂಧನವನ್ನು ಬಾಲಕ-ಬಾಲಕಿಯರಿಗೆ ಹಾಗೂ ತಂಡದ ಸದಸ್ಯರು ಪರಸ್ಪರ ಕಟ್ಟಿಸಿಕೊಂಡು ಮಕ್ಕಳಿಗೆ ಫಲವಸ್ತುಗಳನ್ನು ವಿತರಿಸಿ ವಿಶಿಷ್ಟರೀತಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಇದೆ ಸಂದರ್ಭದಲ್ಲಿ ಅರ್ಕುಳ ಗ್ರಾಮ ಪಂಚಾಯತ್ ನ ಸದಸ್ಯರಾದಂತಹ ಸುಕುಮಾರ್ ಕರ್ಕೇರ, ಪ್ರಶಾಂತ್ ಪೂಜಾರಿ, ಲೋಹಿತ್ ಕರ್ಕೇರಾ ತಂಡದ ಮಹಿಳಾ ಸದಸ್ಯೆ ಆದಂತಹ ಶ್ರೀಮತಿ ಮಮತಾ ಕುತ್ತಾರು,ಚೈತ್ರಾಂಜಲಿ ,ಸ್ವಾತಿ , ಕಾವ್ಯ ಹಾಗು ತಂಡದ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಮನ್ವಿತ್ ಕರ್ಕೇರ ವಹಿಸಿದ್ದರು


Spread the love