ಡಿಕೆಶಿ ವಿರುದ್ಧ ಐಟಿ ಇಡಿ ಸಿಬಿಐ ದುರ್ಬಳಕೆ ಬಿಜೆಪಿಯ ಹತಾಶ ಭಾವನೆಯನ್ನು ತೋರಿಸುತ್ತದೆ : ವಿಶ್ವಾಸ ಶೆಟ್ಟಿ

Spread the love

ಡಿಕೆಶಿ ವಿರುದ್ಧ ಐಟಿ,ಇಡಿ ಸಿಬಿಐ ದುರ್ಬಳಕೆ ಬಿಜೆಪಿಯ ಹತಾಶ ಭಾವನೆಯನ್ನು ತೋರಿಸುತ್ತದೆ : ವಿಶ್ವಾಸ ಶೆಟ್ಟಿ

ಉಡುಪಿ: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಗೊಳಿಸಿ ಬಿಜೆಪಿ ಸರಕಾರವನ್ನು ತರಬೇಕು ಎಂದು ಬಾವಿಸಿದ್ದ ಬಿಜೆಪಿ ನಾಯಕರಿಗೆ ತಮ್ಮ ದಾರಿಗೆ ಅಡ್ದಲಾಗಿ ನಿಂತವರು ಡಿಕೆಶಿ ಅವರನ್ನು ಹೇಗಾದರೂ ಮಾಡಿ ಕಡಿವಾಣ ಹಾಕುವ ಉದ್ದೇಶದಿಂದ ಇಡಿಯನ್ನು ಬಳಸಿಕೊಂಡು ಎಪ್ ಐ ಅರ್ ದಾಖಲಿಸಿದೆ ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಉಡುಪಿ ಜಿಲ್ಲಾ ಅದ್ಯಕ್ಷರಾದ ವಿಶ್ವಾಸ್ ಶೆಟ್ಟಿ ಆರೋಪಿಸಿದ್ದಾರೆ

ವರ್ಷಗಳ ಹಿಂದೆ ನೆಡೆದ ಪ್ರಕರಣ ಈಗ ಎಪ್ ಐ ಅರ್ ದಾಖಲಾಗುತ್ತದೆ ಎಂದರೆ ಇದರಲ್ಲಿ ಬಿಜೆಪಿ ಹಾಗೂ ಕೇಂದ್ರ ಸರಕಾರದ ರಾಜಕೀಯ ದುರುದೇಶ ಹೊಂದಿರವುದು ಸ್ಪಷ್ಟವಾಗಿ ಕಾಣಿಸುತ್ತದೆ.  ಇಂದು ಬಿಜೆಪಿ ನಾಯಕರು ಅರೋಪ ಮಾಡಿದ ಡೈರಿ ವಿಚಾರ ಅದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಂಡು ಒತ್ತಡ ಹಾಕಿ ಬಿಜೆಪಿಯವರೇ ಕಟ್ಟಿದ ಕಟ್ಟು ಕಥೆ ನಿಜವಾಗಿಯೂ ಡೈರಿ ಇದ್ದರೆ ಒಂದು ವರ್ಷದಿಂದ ಸುಮ್ಮನಿದ್ದ ಉದ್ದೇಶ ಎನು?ಹಣವನ್ನು ಯಾರದರೂ ಕೆಜಿ ಲೆಕ್ಕದಲ್ಲಿ ಅಳೆಯುತ್ತಾರೆಯೇ ?ಇವರ ಅರೋಪ ನೋಡಿದರೆ ನಗುಬರುತ್ತಿದೆ ಪ್ರಪಂಚದಲ್ಲಿ ಇಂತಹ ಶತ ಮುರ್ಖರನ್ನು ಎಲ್ಲೂ ಹುಡುಕುವುದು ಕಷ್ಟ

ಈಗಾಗಲೇ ತೈಲ ಬೆಲೆ ಗ್ಯಾಸ್ ದಿನಬಳಕೆ ವಸ್ತುಗಳ ಬೆಲೆ ಎರಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗುತ್ತಿದ್ದು ದಿನದಿಂದ ದಿನಕ್ಕೆ ಕೇಂದ್ರ ಸರಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದು ಮುಂದಿನ ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ನಾಯಕರ ಮೇಲೆ ಐ ಟಿ ಸಿಬಿಐ ಇಡಿ ಯನ್ನು ದುರುಪಯೋಗ ಮಾಡುತ್ತಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love