ಡಿಜೆ ಹಳ್ಳಿ ಗಲಭೆ – ಖಾಸಗಿ ವಾಹಿನಿ ಅ್ಯಂಕರ್ ರಕ್ಷತ್ ಶೆಟ್ಟಿ ಗೆ ಜೀವ ಬೆದರಿಕೆ

Spread the love

ಡಿಜೆ ಹಳ್ಳಿ ಗಲಭೆ – ಖಾಸಗಿ ವಾಹಿನಿ ಅ್ಯಂಕರ್ ರಕ್ಷತ್ ಶೆಟ್ಟಿ ಗೆ ಜೀವ ಬೆದರಿಕೆ

ಬೆಂಗಳೂರು: ಡಿಜೆ ಹಳ್ಳಿ ಗಲಭೆಯ ಬಗ್ಗೆ ಸುದ್ದಿ ವಿಶ್ಲೇಷಣೆ ಮಾಡಿದ ಖಾಸಗಿ ಸುದ್ದಿ ವಾಹಿನಿಯ ನಿರ್ವಾಹಕರಿಗೆ ಜೀವ ಬೆದರಿಕೆ ಬಂದಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಮೂಲದ ರಕ್ಷತ್ ಶೆಟ್ಟಿ ಅವರು ರಾಜ್ಯ ಮಟ್ಟದ ಖಾಸಗಿ ವಾಹಿನಿಯಲ್ಲಿ ಅ್ಯಂಕರ್ ಆಗಿದ್ದು ಡಿಜೆ ಹಳ್ಳಿ ಗಲಭೆಯ ಕುರಿತು ವಿವಿಧ ಡಿಬೇಟ್ ಗಳನ್ನು ನಡೆಸಿಕೊಟ್ಟಿದ್ದರು. ರಕ್ಷತ್ ಅವರಿಗೆ ವಿದೇಶದಿಂದ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.


Spread the love