ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ

Spread the love

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ

ಮಂಗಳೂರು: ನಗರದ ನಂತೂರುಪದವು ಎಂಬಲ್ಲಿ 2014ರಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಮಂಗಳೂರು ಪೂರ್ವ ಠಾಣೆಯ ಪೋಲಿಸರ ತಂಡ ಬಂಧಿಸಿದೆ.

ಬಂಧಿತನನ್ನು ರೋಥಾಸ್ (24) ಎಂದು ಗುರುತಿಸಲಾಗಿದೆ.

ನಂತೂರು ಪದವಿನ ಖಾಸಗಿ ಸಂಸ್ಥಯೊಂದಕ್ಕೆ ಬಂದಿದ್ದ ಲಾರಿಯಲ್ಲಿ ಚಾಲಕ ಅಶೋಕ್ ಕುಮಾರ್ (53) ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವ ಪರೀಕ್ಷೆ ಮತ್ತು ಸಾಕ್ಷೀದಾರರ ಹೇಳೀಕೆಯಲ್ಲಿ ಲಾರಿ ಸಹಚಾಲಕ ರೋಥಾಸ್ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು ಅದರೆ ಆರೋಪಿ ತಲೆಮರೆಸಿಕೊಂಡಿದ್ದನು.

ಪ್ರಕರಣದ ಆರೋಪಿ ಹರಿಯಾಣದಲ್ಲಿರುವ ಬಗ್ಗೆ ಮಾಹಿತಿ ಪಡೆದ ತನಿಖಾಧಿಕಾರಿ ಮಾರುತಿ ಜಿ ನಾಯಕ್ ಅವರು ಎಸ್ ಐ ರಾಘವ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯನ್ನು ಹರಿಯಾಣ ರಾಜ್ಯದ ಕುರುಕ್ಷೇತ್ರ ಬ್ರಹ್ಮ ಸರೋವರ ಬಳಿಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ತನಿಖೆಗೆ ಪೋಲಿಸ್ ಕಸ್ಟಡಿಗೆ ಪಡೆದಿದ್ದಾರೆ.


Spread the love