ತಾಯಿ, ಮಕ್ಕಳ ಹತ್ಯೆ: ಆರೋಪಿಯನ್ನು ಕೂಡಲೇ ಬಂಧಿಸಿ – ದೀಪಕ್ ಕೋಟ್ಯಾನ್

Spread the love

ತಾಯಿ, ಮಕ್ಕಳ ಹತ್ಯೆ: ಆರೋಪಿಯನ್ನು ಕೂಡಲೇ ಬಂಧಿಸಿ – ದೀಪಕ್ ಕೋಟ್ಯಾನ್

ಉಡುಪಿ: ಉಡುಪಿ ಸಮೀಪದ ನೇಜಾರು ತೃಪ್ತಿ ಲೇ ಔಟ್ ನ ಮನೆಯೊಂದಕ್ಕೆ ನುಗ್ಗಿ ವ್ಯಕ್ತಿಯೊಬ್ಬ ತಾಯಿ ಮತ್ತು ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದಿರುವುದು ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಭೀಕರ ಹತ್ಯಾಕಾಂಡವಾಗಿದ್ದು ಆರೋಪಿಯನ್ನು ಕೂಡಲೇ ಬಂಧಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಪೊಲೀಸ್ ಇಲಾಖೆಯನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಆಗ್ರಹಿಸಿದ್ದಾರೆ.

ಸುಶಿಕ್ಷತರ ಜಿಲ್ಲೆಯಾದ ಉಡುಪಿಯಲ್ಲಿ ಇಂತಹ ಭೀಕರ ಘಟನೆ ನಡೆದಿರುವುದು ಅತ್ಯಂತ ಕಳವಳಕಾರಿಯಾಗಿದೆ. ಇಡೀ ಕುಟುಂಬವನ್ನೇ ಭೀಕರ ರೀತಿಯಲ್ಲಿ ಕೊಲೆ ಮಾಡಿ ಸರ್ವನಾಶ ಮಾಡಿರುವುದು ಪ್ರತಿಯೊಬ್ಬರಲ್ಲೂ ಆತಂಕ ಮೂಡಲು ಕಾರಣವಾಗಿದೆ. ಒಂದೇ ಕುಟುಂಬದ ನಾಲ್ವರ ಹತ್ಯೆ ಅತ್ಯಂತ ಅಮಾನುಷ ಕೃತ್ಯವಾಗಿದ್ದು ತೀವ್ರ ಖಂಡನೀಯವಾಗಿದೆ.

ಈ ಪ್ರಕರಣದ ಬಗ್ಗೆ ಪೋಲಿಸರು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದು, ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕಿದೆ. ಪೊಲೀಸ್ ಇಲಾಖೆ ಕೊಲೆಗಾರನನ್ನು ಹಿಡಿದು ಕೊಲೆಗೆ ನೈಜ ಕಾರಣವನ್ನು ಕಂಡು ಹುಡುಕುವುದರ ಮೂಲಕ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುವಂತೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.


Spread the love