ತುಳು ಮಾತನಾಡಲು ತರಬೇತಿ: 13ರಂದು ಚಾಲನೆ

Spread the love

ತುಳು ಮಾತನಾಡಲು ತರಬೇತಿ: 13ರಂದು ಚಾಲನೆ

ಮ0ಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಬಲೇ ತುಳು ಕಲ್ಪುಗ’ ಯೋಜನೆಯಡಿ ತುಳು ಬಾರದವರಿಗೆ ತುಳು ಮಾತನಾಡಲು ಕಲಿಸುವ ಸಲುವಾಗಿ ಅಕ್ಟೋಬರ್ 13 ರಂದು ಸಂಜೆ 4 ಕ್ಕೆ ಅಕಾಡೆಮಿಯ ‘ಸಿರಿಚಾವಡಿ’ಯಲ್ಲಿ ತುಳು ತರಗತಿಯ ಉದ್ಘಾಟನಾ ಸಮಾರಂಭ ಜರಗಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು, ಶಾಸಕ ಜೆ. ಆರ್. ಲೋಬೋ ತುಳು ತರಗತಿಯನ್ನು ಉದ್ಘಾಟಿಸಲಿದ್ದಾರೆ. ತುಳು ಮಾತನಾಡಲು ಕಲಿಯಲಿಚ್ಚಿಸುವ ಆಸ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅವಕಾಶದ ಸದುಪಯೋಗ ಪಡೆಯಬಹುದಾಗಿದೆ.
ಆಸಕ್ತರು ಅಕಾಡೆಮಿ ಮೊಬೈಲ್ ಸಂಖ್ಯೆ: 9901016962 ಗೆ  ಮೆಸೇಜ್ ಮೂಲಕ ಅಥವಾ ಅರ್ಜಿಗಳ ಮೂಲಕ ಅಕಾಡೆಮಿಯಲ್ಲಿ ನೊಂದಾಯಿಸಿ ಕೊಳ್ಳುವಂತೆ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಅವರ ಪ್ರಕಟಣೆ ತಿಳಿಸಿದೆ.

Spread the love