ತೆಂಕ ನಿಡಿಯೂರು ಗ್ರಾಪಂ. ಮಾಜಿ ಅಧ್ಯಕ್ಷ ಸುರೇಶ್ ನಾಯಕ್ ಕಾಂಗ್ರೆಸ್ ಸೇರ್ಪಡೆ

Spread the love

ತೆಂಕ ನಿಡಿಯೂರು ಗ್ರಾಪಂ. ಮಾಜಿ ಅಧ್ಯಕ್ಷ ಸುರೇಶ್ ನಾಯಕ್ ಕಾಂಗ್ರೆಸ್ ಸೇರ್ಪಡೆ

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ನಾಯಕ್ ಅವರು ಕಾಂಗ್ರೆಸ್ ತತ್ವ ಸಿದ್ದಾಂತವನ್ನು ಮೆಚ್ಚಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಗುರುವಾರ ತೆಂಕನಿಡಿಯೂರು ರಾಧ್ಮಾ ರೆಸಿಡೆನ್ಸಿಯಲ್ಲಿ ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ‘ಗ್ರಾಮಪಂಚಾಯತ್ ಚುನಾವಣೆ- 2020’ ರ ಪೂರ್ವಭಾವಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವಾರಜ್ ಅವರಿಂದ ಪಕ್ಷದ ಧ್ವಜ ಸ್ವೀಕಾರ ಮಾಡುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ತೋನ್ಸೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಕಾಂಗ್ರೆಸ್ ನಾಯಕರಾದ ಗಣೇಶ್ ನೆರ್ಗೀ, ಯತೀಶ್ ಕರ್ಕೇರಾ, ನಾರಾಯಣ್ ಕುಂದರ್, ಲಕ್ಷ್ಮಣ್ ಅಂಬಲಪಾಡಿ, ಕೃಷ್ಣಮೂರ್ತಿ ಆಚಾರ್ಯ, ರಾಘು ಪೂಜಾರಿ, ಸಾಯಿರಾಜ್, ಸತೀಶ್ ನಾಯ್ಕ್, ಸಂಪತ್ ಗುಜ್ಜರ್ಬೆಟ್ಟು, ನಿತ್ಯಾನಂದ ಕೆಮ್ಮಣ್ಣು, ಜಯಾನಂದ್, ಮಮತಾ ಶೆಟ್ಟಿ, ಪ್ರಥ್ವಿ ರಾಜ್ ಶೆಟ್ಟಿ, ಸುರೇಶ್ ಕುಮಾರ್, ಅಬೂಬಕ್ಕರ್, ಪ್ರಭಾಕರ್ ಅಂಚನ್, ವಿಶ್ವನಾಥ್ ಶೆಟ್ಟಿ,ವಿಠ್ಠಲ್ ಪೂಜಾರಿ, ಶಶಿರಾಜ್,ಅವಿನಾಶ್, ಧನುಷ್ ಶೆಟ್ಟಿ, ರಾಮಚಂದ್ರ ನಾಯಕ್, ಅಬ್ದುಲ್ ರೆಹಮನ್, ಉಮೇಶ್ ಗಾಣಿಗ, ಪ್ರಕಾಶ್ ಆಚಾರ್ಯ, ಉದಯ್ ಕುಮಾರ್, ಕಿರಣ್ ರೇಜಿನಾಲ್ಡ್, ರವಿರಾಜ್, ಮರಿಟ, ವಿನ್ನಿ, ಲಲಿತಾ,ವಿಮಲ ಹಾಗೂ ಇತರರು ಉಪಸ್ಥಿತರಿದ್ದರು.


Spread the love