ದಕ ಯುವ ಜನತಾದಳ ಕಾರ್ಯಕರ್ತರ ಸಭೆ; ಪಕ್ಷ ಸಂಘಟನೆಗೆ ನಿರ್ಧಾರ

Spread the love

ದಕ ಯುವ ಜನತಾದಳ ಕಾರ್ಯಕರ್ತರ ಸಭೆ; ಪಕ್ಷ ಸಂಘಟನೆಗೆ ನಿರ್ಧಾರ

ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ಕಾರ್ಯಕರ್ತರ ಸಭೆಯು ಜಿಲ್ಲಾಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅಧ್ಯಕ್ಷತೆಯಲ್ಲಿ ಮಂಗಳೂರು ನಗರದ ಜಿಲ್ಲಾ ಜಾತ್ಯತೀತ ಜನತಾದಳ ಕಛೇರಿಯಲ್ಲಿ ನಡೆಯಿತು

ಸಭೆಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವ ಮುಂದಿನ ಹೋರಾಟ, ಬೈಕ್ ಜಾಥಾ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಯಲ್ಲಿ ಯುವ ಜನತಾದಳವನ್ನು ತಳಮಟ್ಟದಿಂದ ಸಂಘಟಿಸುವ ಕುರಿತು ಚರ್ಚಿಸಲಾಯಿತು.

ಇದೇ ವೇಳೆ ಅರ್ಷಕ್ ಇಸ್ಮಾಯಿಲ್ ಹಾಗೂ ಅವರ ಬೆಂಬಲಿಗರನ್ನು ಪಕ್ಷದ ಧ್ವಜ ನೀಡುವ ಮೂಲಕ ಜಿಲ್ಲಾಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಪಕ್ಷಕ್ಕೆ ಸ್ವಾಗತಿಸಿದರು.

ಸಭೆಗೆ ಮುಖ್ಯ ಅತಿಥಿಯಾಗಿ ಜಿಲ್ಲಾ ಜನತಾದಳ ಮಹಾಪ್ರಧಾನ ಕಾರ್ಯದರ್ಶಿ ರಾಮ್ ಗಣೇಶ್ ಅಗಮಿಸಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಯುವ ಜನತಾದಳ ಉಪಾಧ್ಯಕ್ಷ ಪ್ರವೀಣ್ ಮಂಡೋಡಿ ಕಾರ್ಯದರ್ಶಿಗಳಾದ ತೇಜಸ್ ಶೆಟ್ಟಿ,ಪೈಝಲ್,ಡೇಸ್ಮಂಡ್,ದೀಪಕ್,ಕಲಂದರ್,ವಿದ್ಯಾರ್ಥಿ ನಾಯಕ ಸೀನನ್,ಕಲಂದರ್ ಶರೀಪ್ ಪುತ್ತೂರು ಹಾಗೂ ಯುವ ಜನತಾದಳ ಕಾರ್ಯಕರ್ತರು ಭಾಗವಹಿಸಿದ್ದರು

ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ ಸ್ವಾಗತಿಸಿ.ಪ್ರಸ್ತಾವಿಕ ಭಾಷಣ ಮಾಡಿ ವಂದನಾರ್ಪಣೆ ಸಲ್ಲಿಸಿದ್ದರು


Spread the love