ನಕಲಿ ಜ್ಯೋತಿಷಿಯ ಬಂಧನ

Spread the love

ನಕಲಿ ಜ್ಯೋತಿಷಿಯ ಬಂಧನ

ಮಂಗಳೂರು: ಜ್ಯೋತಿಷ್ಯ ಶಾಸ್ತ್ರದ ಮೂಲಕ ವಶೀಕರಣ ಮಾಡಿ ಜನರಿಗೆ ವಂಚಿಸುತ್ತಿದ್ದ ಜೋತಿಷಿ ಮಂಜುನಾಥ ಯಾನೆ ಲಕ್ಷ್ಮಣ್ ರಾವ್ (27) ಎಂಬಾತನನ್ನು ಉರ್ವ ಪೋಲಿಸರು ಬಂಧಿಸಿದ್ದಾರೆ.

ಮಕ್ಕಳ ವಿದ್ಯಾಭ್ಯಾಸ, ಹಣಕಾಸಿನ ತೊಂದರೆ, ಮಾಂಗಲ್ಯ ಭಾಗ್ಯ, ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನೆಪದಲ್ಲಿ ಜನರಿಂದ ಸಾವಿರಾರು ರೂಪಾಯಿ ಪಡೆದು ವಂಚಿಸುತ್ತಿದ್ದನೇಂದು ಆರೋಪಿಸಲಾಗಿದೆ.

ಆರೋಪಿ ಕಾವೂರಿನ ಕುಂಜತ್ತಬೈಲ್ ನಿವಾಸಿಯಾಗಿದ್ದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜನರನ್ನು ಆಕರ್ಷಿಸುತ್ತಿದ್ದ ಎನ್ನಲಾಗಿದ್ದು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದ ಜನರಿಂದ ಹಣವನ್ನು ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ.


Spread the love