ನಕಲಿ ಪತ್ರಕರ್ತನ ವಿರುದ್ಧ ದೂರು ದಾಖಲು

Spread the love

ನಕಲಿ ಪತ್ರಕರ್ತನ ವಿರುದ್ಧ ದೂರು ದಾಖಲು

ಬಂಟ್ವಾಳ: ‘ನಾನು ಖಾಸಗಿ ನ್ಯೂಸ್ ಚಾನಲ್‌ ಕ್ಯಾಮೆರಾಮೆನ್’ ಎಂದು ಹೇಳಿ ಕೊಂಡು ಸಿದ್ಧಕಟ್ಟೆ ನಿವಾಸಿ ಅಶೋಕ್ ಹಲಾಯಿ ಎಂಬಾತ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯವರಿಂದ ₹50 ಸಾವಿರ ಪಡೆದು ವಂಚಿಸಿದ ಘಟನೆ ಗುರುವಾರ ನಡೆದಿದೆ.

ಶಾಲೆ ವಿವಾದವೊಂದಕ್ಕೆ ಸಂಬಂ ಧಿಸಿದಂತೆ ಅಶೋಕ್ ಹಲಾಯಿ ತಾನು ಖಾಸಗಿ ನ್ಯೂಸ್ ಚಾನಲ್‌ ಕ್ಯಾಮೆರಾಮೆನ್ ಎಂದು ಹೇಳಿಕೊಂಡು ಶಾಲೆಗೆ ಬಂದಿದ್ದಾನೆ. ಬಳಿಕ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಸುದ್ದಿ ಪ್ರಸಾರವಾಗದಂತೆ ಮಾಡಲು ತನಗೆ ₹50 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಸಂಸ್ಥೆ ಆಡಳಿತ ಮಂಡಳಿಯವರು ಆತನ ಬ್ಲ್ಯಾಕ್ ಮೇಲ್‌ಗೆ‌ ಮಣಿದು ₹50 ಸಾವಿರದ ಚೆಕ್ ನೀಡಿದ್ದಾರೆ.

ಎಸ್.ವಿ.ಎಸ್ ಆಡಳಿತ ಮಂಡಳಿ ಯಿಂದ ಅಶೋಕನ ದೂರವಾಣಿ ಸಂಖ್ಯೆ ಪಡೆದ ಮಂಗಳೂರು ವರದಿಗಾರರು ಆತನಿಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಳಿಕ ಆತ ₹50 ಸಾವಿರದ ಚೆಕ್ ಅನ್ನು ಶಿಕ್ಷಣ ಸಂಸ್ಥೆಗೆ ವಾಪಸ್ ಕೊಟ್ಟು, ಕ್ಷಮೆ ಕೋರಿ ಪೊಲೀಸರಿಗೆ ದೂರು ನೀಡದಂತೆ ಅಂಗಲಾಚಿ ಕಾಲ್ಕಿತ್ತಿದ್ದಾನೆ.

ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಶೋಕ್‌ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.


Spread the love