ನಗರಸಭಾ ಸದಸ್ಯ ರಮೇಶ್ ಕಾಂಚನ್ ಮುತುವರ್ಜಿಯಲ್ಲಿ ಬಡವರಿಗೆ ದಿನಸಿ, ಆಹಾರ ವಿತರಣೆ

Spread the love

ನಗರಸಭಾ ಸದಸ್ಯ ರಮೇಶ್ ಕಾಂಚನ್ ಮುತುವರ್ಜಿಯಲ್ಲಿ ಬಡವರಿಗೆ ದಿನಸಿ, ಆಹಾರ ವಿತರಣೆ

ಉಡುಪಿ: ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಒಳಕಾಡು ವಾರ್ಡಿನ ಬೀಡಿನಗುಡ್ಡೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ (ಕೊರಗ ಜನಾಂಗ) ಪೌರಕಾರ್ಮಿಕರ ಕಾಲನಿಯ ಬಡ ಕುಟುಂಬಗಳಿಗೆ 31ನೇ ಬೈಲೂರು ವಾರ್ಡಿನ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ ರವರ ವಿಶೇಷ ಮುತುವರ್ಜಿಯಿಂದ ಪ್ಲಾಸ್ಟಿಕ್ ಫಾರ್ ಚೆಂಜ್ ಫೌಂಡೇಶನ್ ಇವರ ವತಿಯಿಂದ ದಿನಸಿ, ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿದರು.

ಪ್ಲಾಸ್ಟಿಕ್ ಫಾರ್ ಚೆಂಜ್ ಫೌಂಡೇಶನ್ನ ಸಂಯೋಜಕರಾದ ಜಯಂತಿ ಮತ್ತು ಉಡುಪಿ ನಗರಸಭೆಯ ಆರೋಗ್ಯ ಅಧಿಕಾರಿಯಾದ ಶಶಿರೇಖಾ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ರವರು ಉಪಸ್ಥಿತರಿದ್ದರು


Spread the love