ನನ್ನೂರಿನ ಜನರು ಬಡತನದ ಕಾರಣದಿಂದ ದುಃಖಿತರಾಗಬೇಡಿ..ನಿಮ್ಮೊಂದಿಗೆ ನಾನಿದ್ದೇನೆ  — ಶೌವಾದ್ ಗೂನಡ್ಕ

Spread the love

ನನ್ನೂರಿನ ಜನರು ಬಡತನದ ಕಾರಣದಿಂದ ದುಃಖಿತರಾಗಬೇಡಿ ನಿಮ್ಮೊಂದಿಗೆ ನಾನಿದ್ದೇನೆ  — ಶೌವಾದ್ ಗೂನಡ್ಕ

ನನ್ನೂರಿನ ಜನರು ಬಡತನದ ಕಾರಣದಿಂದ ದುಃಖಿತರಾಗಬೇಡಿನಿಮ್ಮೊಂದಿಗೆ ನಾನಿದ್ದೇನೆ ಇದುವರೆಗೂ 106 ಕಿಟ್ ಗಳನ್ನು ವಿತರಿಸಲಾಗಿದೆ ಇನ್ನೂ ಕೂಡ ವಿತರಿಸಲು ಸಿದ್ಧನಿದ್ದೇನೆ — ಶೌವಾದ್ ಗೂನಡ್ಕ

ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ಸೇರಿದಂತೆ ಆಸುಪಾಸಿನ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವ ಸರ್ವಧರ್ಮದ ಬಡ ಹಾಗೂ ಮಧ್ಯಮ ವರ್ಗದ 106 ಕುಟುಂಬಗಳಿಗೆ ನನ್ನ ಸ್ನೇಹಿತರಾದ ಉದಾರ ದಾನಿಗಳ ಸಹಕಾರದಿಂದ ಅಕ್ಕಿ ಸೇರಿದಂತೆ ಅವಶ್ಯಕ ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ವಿತರಿಸಲಾಗಿದೆ.

ಮೊದಲ ಹಂತದಲ್ಲಿ 60, ದ್ವಿತೀಯ ಹಂತದಲ್ಲಿ 16 ಹಾಗೂ ತೃತೀಯ ಹಂತದಲ್ಲಿ 30 ಕಿಟ್ ಗಳನ್ನು ವಿತರಿಸಲಾಗಿದ್ದು, ನನ್ನೂರಿನ ಯಾವ ಕುಟುಂಬವೂ ಕೂಡ ಬಡತನದ ಕಾರಣದಿಂದ ದುಃಖಿತರಾಗಬಾರದು..ಇನ್ನೂ ಕೂಡ ಕಿಟ್ ಗಳನ್ನು ವಿತರಿಸಲು ಸಿದ್ಧನಿದ್ದು, ಸಂಕಷ್ಟದಲ್ಲಿರುವವರ ಜೊತೆ ಸದಾ ನಾನಿದ್ದೇನೆಂದು ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ. ಘಟಕದ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರು   ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಿಟ್ ಗಳನ್ನು ಫಲಾನುಭವಿಗೆ ನೀಡುವ ವೇಳೆ ಫೋಟೋಗಳನ್ನು ತೆಗೆಯಬಾರದೆಂದು ತಿಳಿಸಿದ್ದೇನೆ ಕಿಟ್ ಗಳಿಗೆ ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಸ್ಟಿಕ್ಕರ್ ಗಳನ್ನು ಕೂಡ ಅಂಟಿಸಿಲಾಗಿಲ್ಲ. ಸಂಪಾಜೆ, ಕಲ್ಲುಗುಂಡಿ,ದೊಡ್ಡಡ್ಕ ಹಾಗೂ ಅರಂತೋಡು ಭಾಗಗಳಲ್ಲಿಯೂ ನನ್ನ ಗಮನಕ್ಕೆ ಬಂದಂತಹ ಬಡ ಕುಟುಂಬಗಳಿಗೆ ಕಿಟ್ ಗಳನ್ನು ನೇರವಾಗಿ ಅವರ ಮನೆಗಳಿಗೆ ತಲುಪಿಸಿದ್ದೇನೆ. ಒರ್ವ ಸಾಮಾನ್ಯ ವಿದ್ಯಾರ್ಥಿಯಾಗಿರುವ ನನಗೆ ದೇವರು ಇಂತಹ ಪರಿಸ್ಥಿತಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಶಕ್ತಿಯನ್ನು ನೀಡಿದ್ದು, ನನ್ನ ಸ್ನೇಹಿತರ ಸಹಕಾರದೊಂದಿಗೆ ನನ್ನೂರಿನ ಜನರ ಸಂಕಷ್ಟಗಳಿಗೆ ಕೈಲಾದ ಮಟ್ಟಿನ ಸಹಾಯವನ್ನು ಮಾಡುತ್ತಿದ್ದೇನೆಂದು ಶೌವಾದ್ ಗೂನಡ್ಕರವರು ಈ ವೇಳೆ ಹೇಳಿದ್ದಾರೆ.


Spread the love