ನಳಿನ್ ಕುಮಾರ್ ಕ್ಷೇತ್ರಕ್ಕೆ ಮಾಡಿದ್ದಕ್ಕೆ ಜನರ ಆಶೀರ್ವಾದ ಮಾಡಿದ್ದಾರೆ – ವೇದವ್ಯಾಸ ಕಾಮತ್

Spread the love

 ನಳಿನ್ ಕುಮಾರ್ ಕ್ಷೇತ್ರಕ್ಕೆ ಮಾಡಿದ್ದಕ್ಕೆ ಜನರ ಆಶೀರ್ವಾದ ಮಾಡಿದ್ದಾರೆ – ವೇದವ್ಯಾಸ ಕಾಮತ್

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವನ್ನು ಕಂಡಿರುವ ನಮ್ಮ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದಿಸುವುದಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಬಹಳ ದೊಡ್ಡ ಅಂತರದಿಂದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಪಕ್ಷದ ಗೆಲುವಿಗೆ ತೆರೆಮರೆಯಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ನಾಗರಿಕರೂ ಕೂಡ ಈ ಗೆಲುವಿನಲ್ಲಿ ಪಾಲುದಾರರು. ನವ ಭಾರತದ ಶ್ರೇಷ್ಟ ಶಿಲ್ಪಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಐದು ವರ್ಷಗಳಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಅದೇ ರೀತಿಯಲ್ಲಿ ನಮ್ಮ ಸಂಸದ ನಳಿನ್ ಕುಮಾರ್ ಕಟೀಲು ಅವರು ಕೂಡ ಹಗಲಿರುಳು ಕ್ಷೇತ್ರದ ಅಭಿವೃದ್ಧಿಗೆ ದುಡಿದಿರುವುದಕ್ಕೆ ಜನರ ಆರ್ಶೀವಾದ ಸಿಕ್ಕಿದೆ. ಇದು ಸಂಭ್ರಮದ ಘಳಿಗೆ ಎಂದು ಶಾಸಕ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.


Spread the love