ನಳಿನ್ ಕುಮಾರ್ ನಂ. 1 ಸಂಸದರಾದರೆ ಉಳಿದ 523 ಸಂಸದರ ಪಾಡೇನು? ಹರೀಶ್ ಕುಮಾರ್

Spread the love

ನಳಿನ್ ಕುಮಾರ್ ನಂ. 1 ಸಂಸದರಾದರೆ ಉಳಿದ 523 ಸಂಸದರ ಪಾಡೇನು? ಹರೀಶ್ ಕುಮಾರ್

ಮಂಗಳೂರು: ದಕ ಜಿಲ್ಲೆಯ ಅಭಿವೃದ್ಧಿ ಪರ ಕಿಂಚಿತ್ತೂ ಕೆಲಸ ಮಾಡದ ಸಂಸದ ನಳಿನ್ ಕುಮಾರ್ ಕಟೀಲ್ ನಂಬರ್ ಒನ್ ಸಂಸದರಾಗಿದ್ದರೆ ದೇಶದ ಉಳಿದ 523 ಸಂಸದರ ಪಾಡೇನು ಎಂದು ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಎಂದೂ ಕೂಡ ಹೇಳಿದ ಕೆಲಸವನ್ನು ಮಾಡಿಲ್ಲ ಮಂಗಳವಾರ ಬಿಜೆಪಿಗರು ಗಲಭೆ ಸೃಷ್ಠಿಸಿ ಬೇರೆಯವರ ತಲೆಗೆ ಕಟ್ಟುವ ಪ್ರಯತ್ನ ಮಾಡಿದರು. ಎರಡನೇ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಅವರು ಇಂತಹ ವಿಚಾರಗಳಿಗೆ ಹೆಸರುವಾಸಿಯಾಗಿದ್ದಾರೆಯೇ ವಿನಹ ಅಭಿವೃದ್ಧಿ ವಿಚಾರದಲ್ಲಿ ಚಿಂತಿಸುತ್ತಿಲ್ಲ ಅಲ್ಲದೆ ಕೆಲಸ ಕೂಡ ಮಾಡುತ್ತಿಲ್ಲ. ಸಂಸತ್ತಿನಲ್ಲಿ ಮಾತನಾಡದ ನಳಿನ್ ಕುಮಾರ್ ನಂ 1 ಸಂಸದ ಎಂದು ಬಿಂಬಿಸಲ್ಪಡುತ್ತಿರುವುದು ವಿಪರ್ಯಾಸ ಎಂದರು.

ಅಡಿಕೆ ಕಾನ್ಸರ್ ಕಾರಕ ಎಂದು ಸರಕಾರವೇ ಸಂಸತ್ತಿನಲ್ಲಿ ಹೇಳಿಕೆ ನೀಡಿದೆ ಆದರೆ ಸಂಸದರು ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎನ್ನುತ್ತಿದ್ದಾರೆ. ಅಡಕೆ ಬೆಳೆಗಾರರ ಪರ ಸರಕಾರ ಇದೆ ಎನ್ನುವ ಸಂಸದರೆ ಹಾಗದರೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ನೀಡಿದ ಹೇಳಿಕೆ ಸುಳ್ಳೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಜಿಲ್ಲೆಯವರೇ ಆದ ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡದಿರುವುದು ವಿಪರ್ಯಾಸ ಎಂದರು.

ಸುದ್ದಿಗೋಷ್ಟಿಯಲ್ಲಿ ಮೇಯರ್ ಕವಿತಾ ಸನೀಲ್, ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ಶಶಿಧರ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love