ನಾಗರಿಕ ಸಮಿತಿಯಿಂದ ಶಿರೂರು ಶ್ರೀ ಸ್ಮರಣಾರ್ಥ ಗಾಲಿ ಕುರ್ಚಿ ಕೊಡುಗೆ 

Spread the love

ನಾಗರಿಕ ಸಮಿತಿಯಿಂದ ಶಿರೂರು ಶ್ರೀ ಸ್ಮರಣಾರ್ಥ ಗಾಲಿ ಕುರ್ಚಿ ಕೊಡುಗೆ 

ಉಡುಪಿ: ವೃಂದಾವನಸ್ಥರಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸ್ಮರಣಾರ್ಥವಾಗಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರು, ಸೊಂಟದ ಸ್ವಾದೀನ ಕಳೆದುಕೊಂಡು, ಶಯನ ಮಂಚದಲ್ಲಿಯೇ ಅಸಹಾಯಕ ಸ್ಥಿತಿಯಲ್ಲಿ ದಿನ ಕಳೆಯುತ್ತಿದ ಅಮುಂಜೆಯ ಗೋಪಾಲ ಮೇಸ್ತ್ರಿ ಅವರಿಗೆ ತಿರುಗಾಡಲು ಅನುಕೂಲವಾಗಲು ಗಾಲಿ ಕುರ್ಚಿಯನ್ನು ಕೊಡುಗೆಯಾಗಿ ಅವರ ಮನೆಗೆ ಭೇಟಿ ನೀಡಿ ನೀಡಿದರು.

ಈ ಸಮಯದಲ್ಲಿ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ಲಯನ್ಸ್ ಕ್ಲಬ್ ಸದಸ್ಯ ವಾದಿರಾಜ ರಾವ್, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ವಾಸುದೇವ್ ಚಿತ್ಪಾಡಿ, ತಾರಾನಾಥ್ ಮೇಸ್ತ ಶಿರೂರು, ಅಕ್ಷಭ್ಯ ಆಚಾರ್ಯ ಉಪಸ್ಥಿತರಿದ್ದರು.


Spread the love