ನೆಲ್ಯಾಡಿ ನಿವಾಸಿ ಕತಾರ್ ನಲ್ಲಿ ನಿಧನ..ಮೃತದೇಹ ಊರಿಗೆ ಸಾಗಿಸಲು ಇಂಡಿಯನ್ ಸೋಶಿಯಲ್ ಫೋರಮ್ ನೆರವು 

Spread the love

ನೆಲ್ಯಾಡಿ ನಿವಾಸಿ ಕತಾರ್ ನಲ್ಲಿ ನಿಧನ..ಮೃತದೇಹ ಊರಿಗೆ ಸಾಗಿಸಲು ಇಂಡಿಯನ್ ಸೋಶಿಯಲ್ ಫೋರಮ್ ನೆರವು 

ಮೂಲತಃ ಕಡಬ ತಾಲೂಕು ಹೊಸಮಠ ನಿವಾಸಿ ಪ್ರಸ್ತುತ ನೆಲ್ಯಾಡಿಯಲ್ಲಿ ವಾಸವಾಗಿರುವ ಆದಮ್ ಹೊಸಮಠ ಎಂಬವರು ಕತಾರ್ ನಲ್ಲಿ ತಾನು ಉದ್ಯೋಗ ಮಾಡುತಿದ್ದ ಸ್ಥಳದಲ್ಲಿ ಹೃದಯಾಘಾತದಿಂದ ದಿನಾಂಕ 13/03/2019 ರಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆಗೆ ಸ್ಪಂದಿಸದ ಆದಮ್ ರವರು ಇಹಲೋಕ ತ್ಯಜಿಸಿದರು.

ಮೃತರ ಕುಟುಂಬದ ಅಪೇಕ್ಷೆಯಂತೆ ಮೃತದೇಹವನ್ನು ಊರಿಗೆ ಸಾಗಿಸಲು ಮೃತರ ಸ್ನೇಹಿತ ಮುಸ್ತಫಾ ತೋಕೂರ್, ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯ ಅಯ್ಯುಬ್ ಉಳ್ಳಾಲ್ ರವರನ್ನು ಸಂಪರ್ಕಿಸಿದರು,ತಕ್ಷಣ ಕಾರ್ಯ ಪ್ರವೃತ್ತರಾದ ಅಯ್ಯುಬ್ ರವರು ಲತೀಫ್ ಮಡಿಕೇರಿಯವರ ನೇತೃತ್ವದಲ್ಲಿ ಎಲ್ಲಾ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಮೃತದೇಹವನ್ನು 19/03/2019ರಂದು ಊರಿಗೆ ಕಳಿಸಿಕೊಡಲಾಯಿತು.

ಮೃತದೇಹವನ್ನು ಬೆಂಗಳೂರಿನಿಂದ ಊರಿಗೆ ತಲುಪಿಸಲು ನೆಲ್ಯಾಡಿ ಎಸ್ಡಿಪಿಐ ಸದಸ್ಯ ಸುಲೈಮಾನ್ ಕೊಡ್ಲಿಪೇಟೆ ನೆರವಾದರು.ಮೃತದೇಹವನ್ನು ಊರಿಗೆ ಸಾಗಿಸುವಲ್ಲಿ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಾದ ಅಶ್ರಫ್ ಪುತ್ತೂರು,ಖಾಲಿದ್ ಮೊಹಸಿನ್,ಇಬ್ರಾಹಿಂ ಹಳೆಯಂಗಡಿ,ಸಲೀಂ ಬಂಗಾಡಿ,ಮುಸ್ತಫಾ
ತೋಕೂರ್,ಹಾಗು ಮಜೀದ್ ಬೆಳ್ತಂಗಡಿ ಸಹಕರಿಸಿದರು.ಮೃತರ ದಫನ ಕ್ರಿಯೆಯು 20/03/2019 ರಂದು ಅರಸಿನಮಕ್ಕಿ ರಹ್ಮಾನಿಯಾ ಜುಮಾ ಮಸೀದಿ ದಫನ ಭೂಮಿಯಲ್ಲಿ ನಡೆಸಲಾಯಿತು.

ಮೃತ ಆದಮ್ ರವರು ಪತ್ನಿ,ಹಾಗು ಪುತ್ರರು,ಸಹೋದರರಾದ ಅರಸಿನಮಕ್ಕಿ ಜುಮಾ ಮಸೀದಿ ಖತೀಬ್ ಮುಹಮ್ಮದ್ ಮುಸ್ಲಿಯಾರ್ ಮತ್ತು ಮಾಜಿ ಪುತ್ತೂರು ತಾಲೂಕು ಪಂಚಾಯತ್ ಸದಸ್ಯ ದಾವೂದ್ ಇಬ್ರಾಹಿಂ ರನ್ನು ಅಗಲಿದರು.


Spread the love