ಪಂಜಿಮೊಗರು ಜೋಡಿ ಕೊಲೆಗೆ ಐದು ವರ್ಷ ; ಆರೋಪಿಗಳ ಸುಳಿವಿಲ್ಲ

Spread the love

ಪಂಜಿಮೊಗರು ಜೋಡಿ ಕೊಲೆಗೆ ಐದು  ವರ್ಷ ; ಆರೋಪಿಗಳ ಸುಳಿವಿಲ್ಲ

ಮಂಗಳೂರು: ರಾಜ್ಯದ ಜನತೆಯು ಬೆಚ್ಚಿ ಬೀಳುವಂತೆ ಮಾಡಿದ ಪಂಜಿಮೊಗರು ಜೋಡಿ ಕೊಲೆ ನಡೆದು ಜೂನ್ 28 ರಂದು ಐದು ವರ್ಷವಾಗುತ್ತಿದೆ ಆರೋಪಿಗಳ ಪತ್ತೆ ಮಾತ್ರ ಇನ್ನೂ ಆಗಿಲ್ಲ. ಫಾತಿಮಾ ರಜಿಯಾ ಹಾಗೂ ಜುವಾ ಮುಗ್ದ ತಾಯಿ ಮಗುವಿನ ಕೊಲೆ ಹಾಡು ಹಗಲೇ ನಡೆದರೂ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೋಲೀಸ್ ಇಲಾಖೆ ವಿಫಲವಾದಾಗ ಪಂಜಿಮೊಗರಿನ ನಾಗರಿಕರು ಡಿ.ವೈ.ಎಫ್.ಐ ಜೊತೆ ಸೇರಿ ಉನ್ನತ ಮಟ್ಟದ ತನಿಕೆಗೆ ಆಗ್ರಹಿಸಿ ಹಲವಾರು ಪ್ರತಿಭಟನೆ ಕಾಲ್ನಡಿಗೆ ನಡೆಸಿ ಪ್ರಕರಣ ಸಿ.ಐ.ಡಿ ಗೆ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿ.ಐ.ಡಿ ತನಿಖೆಯಲ್ಲೂ ಯಾವೂದೇ ರೀತಿಯ ಪ್ರಗತಿ ಕಾಣುತ್ತಿಲ್ಲ ಸಿ.ಐ.ಡಿ ತನಿಖೆಯ ಪ್ರಗತಿಯ ಕಡೆ ರಾಜ್ಯ ಸರಕಾರದ ಪ್ರತಿನಿಧಿ ಶಾಸಕರಾದ ಮೊಯ್ದಿನ್ ಬಾವ ಗಮನ ಹರಿಸುತ್ತಿಲ್ಲ.

panjimogaru-20160627

ಜೋಡಿ ಕೊಲೆ ನಡೆದ ಸಂದರ್ಭ ರಾಜ್ಯದಲ್ಲಿ ಬಿ.ಜೆ.ಪಿ ಸರಕಾರವಿತ್ತು ಆ ಸಂದರ್ಭ ಕಾಂಗ್ರೆಸ್ಸ್ ಅಲ್ಪಸಂಖ್ಯಾತ ಘಟಕ ಚುನಾವಣೆ ದೃಷ್ಟಿಕೋಣವನ್ನಿರಿಸಿ ಮೊಯ್ದಿನ್ ಬಾವ ನೇತೃತವದಲ್ಲಿ ಪ್ರತಿಭಟನೆ ಕೂಡ ಮಾಡಿತ್ತು. ಮೊಯ್ದಿನ್ ಬಾವ ಚುನಾವಣಾ ಪ್ರಚಾರ ಸಂದರ್ಭ ಪಂಜಿಮೊಗರು ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಎಲ್ಲಾ ರೀತಿಯ ಪ್ರಯತ್ನ ಬರುವುದಾಗಿ ಆಶ್ವಾಸನೆ ನೀಡಿ ಗೆದ್ದ ನಂತರ ಎಲ್ಲವನ್ನು ಮರೆತಿರುವ ಹಾಗಿದೆ.  ಪಂಜಿಮೊಗರಿಗೆ ಭೇಟಿ ನೀಡುವ ಸಂದರ್ಭ ಪ್ರಶ್ನಿಸಿದಾಗ ನುಣುಚಿಕೊಳ್ಳುವ ಬೇಜವಬ್ದಾರಿ ಉತ್ತರ ನೀಡುವ ಶಾಸಕರು ಮುಗ್ದ ಜೀವಗಳು ಬಲಿಯಾಗಿರುವುದೇ ಮರೆತಂತಿದೆ. ಇನ್ನು ಜಿಲ್ಲೆಯಲ್ಲಿನ ಇತರ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

 ಜಿಲ್ಲೆಯಲ್ಲಿ ಕೇವಲ ಮಾನವೀಯತೆಯಲ್ಲಿ ಜನಪ್ರಿಯಗೊಂಡಿರುವ ಸಚಿವ ಯು.ಟಿ ಖಾದರ್ ರವರಿಗೆ ಈ ಪ್ರಕರಣದಲ್ಲಿ ಮಾನವೀಯತೆ ತೋರಿಸಲು ಪುರುಸೋತ್ತಿಲ್ಲ. ತಮ್ಮದೇ ರಾಜ್ಯ ಸರಕಾರವಿದ್ದರೂ ಸಿ.ಐ.ಡಿ ತನಿಖೆಯ ಪ್ರಗತಿಯನ್ನೂ ಪರಿಶೀಲಿಸದ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಭಾಗವಾಗಿರುವ ಸಚಿವರು ಇದ್ದು ಏನು ಪ್ರಯೋಜನ. ಜಿಲ್ಲೆಯ ಹಲಾವಾರು ಪ್ರಕರಣಗಳು ಸಿ.ಐ.ಡಿ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗುತ್ತಿರುವ ಸಿ.ಐ.ಡಿ ಮೇಲಿನ ನಂಬಿಕೆಯನ್ನು ಜನ ಕಳೆದುಕೊಳ್ಳುತಿದ್ದಾರೆ. ಪಂಜಿಮೊಗರು ಜೋಡಿ ಕೊಲೆ ಪ್ರಕರಣದಲ್ಲಿ ವಿಫಲವಾಗಿರುವ ಸಿ.ಐ.ಡಿ ತನಿಖೆಯನ್ನು ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆಗೆ ನಮ್ಮ ಬೇಡಿಕೆಯಾಗಿದೆ.

ಪಂಜಿಮೊಗರಿನ ಎರಢು ಮುಗ್ದ ಜೀವಗಳ ಕೊಲೆ ಪ್ರಕರಣವನ್ನು ಇನ್ನಾದರೂ ಗಮನಹರಿಸಿ ಶಾಸಕರೇ. ಇಲ್ಲದಿದ್ದರೆ ನಿಮ್ಮ ಬೇಜವಬ್ದಾರಿತನಕ್ಕೆ ತಕ್ಕ ಶಾಸ್ತಿ ಮಡಲು ಪಂಜಿಮೊಗರಿನ ನಾಗರಿಕರಿಗೆ ತಿಳಿದಿದೆ. ಗೆಲ್ಲುವ ಮೊದಲು ಚುನಾವಣೆಗಾಗಿ ಪಂಜಿಮೊಗರಿನ ಜೋಡಿ ಕೊಲೆ ಪ್ರಕರಣವನ್ನು ಬಳಸಿದ್ದ ನೀವು  ಈಗ ಮರೆತಿದ್ದೀರಿ. ಅಲ್ಪಸಂಖ್ಯಾತರೆಂದುಕೊಂಡು ಗೆದ್ದು ಹೋಗಿರುವ ಮೊಯ್ದಿನ್ ಬಾವ ತಮ್ಮದೇ ಸಮುದಾಯದ ಮುಗ್ದ ತಾಯಿ ಮಗುವಿಗೆ ನ್ಯಾಯ ಒದಗಿಸಲು ವಿಫಲರಗಿರುವುದು ನಾಚಿಕೆಗೇಡಿನ ಸಂಗತಿ. ಪವಿತ್ರ ರಂಜಾನ್ ತಿಂಗಳ ಈ ಸಂಧರ್ಭದಲ್ಲಾದರೂ ಈ ಪ್ರಕರಣಕ್ಕೆ ನ್ಯಾಯ ಒzಗಿಸಿ. ನೀವು ನಾಗರಿಕರಿಗೆ ನೀಡಿದ ಬರವಸೆಗಳನ್ನು ನೀವು ಮರೆತಿರಬಹುದು ನಾವು ಮರೆತಿಲ್ಲ ಎಂದು ಪಂಜಿಮೊಗರು ನಾಗರಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love