ಪರ್ಕಳ – ಮಣಿಪಾಲ – ಉಡುಪಿ ಮುಖ್ಯ ರಸ್ತೆ ಸಮಸ್ಯೆ ಶಾಸಕ ರಘುಪತಿ ಭಟ್ ಭೇಟಿ, ಪರಿಶೀಲನೆ

Spread the love

ಪರ್ಕಳ – ಮಣಿಪಾಲ – ಉಡುಪಿ ಮುಖ್ಯ ರಸ್ತೆ ಸಮಸ್ಯೆ ಶಾಸಕ ರಘುಪತಿ ಭಟ್ ಭೇಟಿ, ಪರಿಶೀಲನೆ

ಉಡುಪಿ: ಪರ್ಕಳ, ಮಣಿಪಾಲ, ಉಡುಪಿ ಮುಖ್ಯ ರಸ್ತೆಯಲ್ಲಿ ಡಿವೈಡರ್ ಹಾಗೂ ರೇಲಿಂಗ್ ಗಳನ್ನು ಅಳವಡಿಸಿರುವುದರಿಂದ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಬಂದ ದೂರುಗಳ ಅನ್ವಯ ಗುರುವಾರ ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ರವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕರು ರಸ್ತೆ ಸುರಕ್ಷತಾ ಸಮಿತಿಯಲ್ಲಿ ನಿರ್ಣಯ ಮಾಡಿ ಕೆಲವೊಂದು ಮಾರ್ಪಾಡುಗಳನ್ನು ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರುಗಳಾದ ಮಂಜುನಾಥ್ ಮಣಿಪಾಲ್, ವಿಜಯಲಕ್ಷ್ಮಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್. ವಿಷ್ಣುವರ್ಧನ್, ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ್, ಮಣಿಪಾಲ ವೃತ್ತ ನಿರೀಕ್ಷಕರಾದ ಮಂಜುನಾಥ್ ಎಂ, ಉಪ ನಿರೀಕ್ಷಕರಾದ ರಾಜಶೇಖರ್, ಸಂಚಾರಿ ಉಪ ನಿರೀಕ್ಷಕರಾದ ಅಬ್ದುಲ್ ಖಾದರ್, ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ನಾಯಕ್, ಸಹಾಯಕ ಅಭಿಯಂತರರಾದ ಮಂಜುನಾಥ್ ನಾಯಕ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.


Spread the love