ಪಶ್ಚಿಮ ವಲಯದ 47 ಪಿ.ಎಸ್.ಐ.ಗಳ ವರ್ಗಾವಣೆ

Spread the love

ಪಶ್ಚಿಮ ವಲಯದ 47 ಪಿ.ಎಸ್.ಐ.ಗಳ ವರ್ಗಾವಣೆ

ಮಂಗಳೂರು: ಪೊಲೀಸ್ ಇಲಾಖೆಯಿಂದ ಪಶ್ಚಿಮ ವಲಯದ 47 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಧರ್ಮಸ್ಥಳ ಠಾಣೆಯಿಂದ ಅವಿನಾಶ್ ಅವರನ್ನು ಬಂಟ್ವಾಳ ನಗರ ಠಾಣೆ ಕಾನೂನು ಮತ್ತು ಸುವ್ಯವಸ್ಥೆ, ಬೆಳ್ಳಾರೆ ಠಾಣೆಯ ಈರಯ್ಯ ಡಿಎಮ್ ಅವರನ್ನು ಉಪ್ಪಿನಂಗಡಿ, ಪುತ್ತೂರು ನಗರ ಠಾಣೆಯ ಅಪರಾಧ ವಿಭಾಗದ ಎಂ ವಿ ಚೆಲುವಯ್ಯ ಅವರನ್ನು ಪುತ್ತೂರು ಸಂಚಾರ ಠಾಣೆಗೆ, ಮೆಸ್ಕಾಂ ಜಾಗೃತ ದಳದ ಲೋಲಾಕ್ಷ ಅವರನ್ನು ವೇಣೂರು ಠಾಣೆಗೆ, ಬೆಳ್ತಂಗಡಿ ಸಂಚಾರ ಠಾಣೆಯ ಓಡಿಯಪ್ಪ ಗೌಡರನ್ನು ಧರ್ಮಸ್ಥಳ ಠಾಣೆಗೆ, ಉಪ್ಪಿನಂಗಡಿ ಠಾಣೆಯ ನಂದಕುಮಾರ ಎಂ ಎಮ್ ಅವರನ್ನು ಬೆಳ್ತಂಗಡಿ ಠಾಣೆಗೆ, ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಸುಧಾಕರ ತೋನ್ಸೆ ಅವರನ್ನು ಹಿರಿಯಡ್ಕ ಠಾಣೆಗೆ, ವಿಟ್ಲ ಠಾಣೆಯ ಯಲ್ಲಪ್ಪ ಎಸ್ ಅವರನ್ನು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಗೆ, ಅಮಾಸೆಬೈಲು ಠಾಣೆಯ ಸುದರ್ಶನ್ ಬಿ ಎನ್ ಅವರನ್ನು ಕುಂದಾಪುರ ಸಂಚಾರ ಠಾಣೆಗೆ, ಕುಂದಾಪುರ ಗ್ರಾಮಾಂತರ ಠಾಣೆಯ ಶ್ರೀಧರ ನಾಯ್ಕ್ ಅವರನ್ನು ಶಂಕರನಾರಾಯಣ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಹೆಜಮಾಡಿ ಸಿ ಎಸ್ ಪಿ ಠಾಣೆಯ ಶೇಖರ ಅವರನ್ನು ಉಡುಪಿ ಸಂಚಾರ ಠಾಣೆಗೆ, ಕಾರ್ಕಳ ನಗರ ಠಾಣೆಯ ನಂಜಾ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮಾಂತರ ಠಾಣೆಗೆ, ಉತ್ತರ ಕನ್ನಡ ಜಿಲ್ಲೆಯ ಡಿಸಿ ಆರ್ ಬಿ ಘಟಕದ ಕಲ್ಪನ ಬಿ ಆರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಡಲು ಗಸ್ತುಪಡೆ ಘಟಕಕ್ಕೆ, ಮಲ್ಪೆ ಠಾಣೆಯ ಮಧು ಬಿ ಇ ಅವರನ್ನು ಬೈಂದೂರು ಠಾಣೆಗೆ, ಬೈಂದೂರು ಠಾಣೆಯ ತಿಮ್ಮೇಶ್ ಬಿ ಎನ್ ಅವರನ್ನು ಕಾರ್ಕಳ ನಗರ ಠಾಣೆಗೆ, ಉತ್ತರ ಕನ್ನಡ ಜಿಲ್ಲೆಯ ಮಂಕಿ ಠಾಣೆಯ ನೀತು ಗುಡೆ ಅವರನ್ನು ಮಲ್ಪೆ ಠಾಣೆಗೆ, ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರ ಠಾಣೆಯ ನವೀನ್ ಎಸ್ ನಾಯ್ಕ್ ಅವರನ್ನು ಗೋಕರ್ಣ ಠಾಣೆಗೆ, ಕಾರವಾರ ನಗರಠಾಣೆಯ ಅಪರಾಧ ವಿಭಾಗದ ರೇವಣ ಸಿದ್ಧಪ್ಪ ಜೀರಂಕಲಗಿ ಕಾರವಾರ ನಗರ ಠಾಣೆಗೆ, ಕುಮಟಾ ಠಾಣೆಯ ಇ ಸಿ ಸಂಪತ್ ಅವರ ಅಂಕೋಲ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಠಾಣೆಯ ಆನಂದ ಮೂರ್ತಿಯವರನ್ನು ಕುಮಟಾ ಠಾಣೆಗೆ, ಸಿರ್ಸಿ ಗ್ರಾಮಾಂತರ ಠಾಣೆಯ ಯಲ್ಲಾಲಿಂಗ ಕುನ್ನೂರ ಅವರನ್ನು ಹಳಿಯಾಳ ಠಾಣೆಗೆ, ಸಿರ್ಸಿ ಹೊಸ ಮಾರುಕಟ್ಟೆ ಠಾಣೆಯ ಶಶಿಕುಮಾರ್ ಸಿ ಆರ್ ಅವರನ್ನು ಹೊನ್ನಾವರ ಠಾಣೆಗೆ, ಕುಮಟ ಸಿಎಸ್ಪಿ ಠಾಣೆಯ ಶ್ಯಾಮ್ ಪಾವಸ್ಕರ್ ಅವರನ್ನು ಸಿರ್ಸಿ ಗ್ರಾಮಾಂತರ ಠಾಣೆಗೆ, ದಾಂಡೇಲಿ ನಗರ ಠಾಣೆಯ ನಾಗಪ್ಪ ಅವರನ್ನು ಶಿರ್ಸಿ ಹೊಸಮಾರುಕಟ್ಟೆ ಠಾಣೆಗೆ, ದಾಂಡೇಲಿ ನಗರ ಠಾಣೆಯ ಉಮೇಶ್ ಪಾವಸ್ಕರ್ ಅವರನ್ನು ಸಿರ್ಸಿ ನಗರ ಠಾಣೆಗೆ, ಸಿರ್ಸಿ ನಗರ ಠಾಣೆಯ ಮಾಲಿನಿ ಹಾಸಭಾವಿ ಅವರನ್ನು ಸಿಎಸ್ಪಿ ಕುಮಟಾ ಠಾಣೆಗೆ, ಕಾರವಾರ ಸಂಚಾರ ಠಾಣೆಯ ನಿಂಗಪ್ಪ ಜಕ್ಕಣ್ಣನವರ್ ಅವರನ್ನು ಕಾರವಾರ ಸಂಚಾರ ಠಾಣೆಗೆ, ಕಾರವಾರ ಸಿಎಸ್ಪಿ ಠಾಣೆಯ ಪಿಬಿ ಕೊಣ್ಣೂರು ಅವರನ್ನು ಮಂಕಿ ಠಾಣೆಗೆ, ಬೇಲೆಕೇರಿ ಠಾಣೆಯ ವೀಣಾ ಹೊನ್ನಿ ಅವರನ್ನು ಗೋಕರ್ಣ ಠಾಣೆಗೆ, ಹೊನ್ನಾವರ ಠಾಣೆಯ ಎಂ ವಿ ಚಂದಾವರ ಅವರನ್ನು ಸಿದ್ದಾಪುರ ಠಾಣೆಗೆ, ಮುರ್ಡೇಶ್ವರ ಠಾಣೆಯ ಮೋಹಿನಿ ಶೆಟ್ಟಿ ಅವರನ್ನು ಸಿಎಸ್ಪಿ ಬೇಲೆಕೆರೆ ಠಾಣೆಗೆ, ಅಂಬಿಕಾನಗರ ಠಾಣೆಯ ಮಹಾದೇವಿ ನಾಯ್ಕೋಡಿ ಅವರನ್ನು ದಾಂಡೇಲಿ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಸಿಂಗಟಗೆರೆ ಠಾಣೆಯ ಹೆಚ್ ಆರ್ ವಿನುತ ಅವರನ್ನು ಲಿಂಗದಹಳ್ಳೀ ಠಾಣೆಗೆ, ಚಿಕ್ಕಮಗಳೂರು ನಗರಠಾಣೆಯ ಬಸವರಾಜ್ ಜಿ ಕೆ ಅವರನ್ನು ಆಲ್ಕೂರು ಠಾಣೆಗೆ, ಹರಿಹರಪುರ ಠಾಣೆಯ ರಘುನಾಥ್ ಎಸ್ ವಿ ಅವರನ್ನು ಲಕ್ಕವಳ್ಳಿ ಠಾಣೆಗೆ, ಬೀರೂರು ಠಾಣೆಯ ಅಪರಾಧ ವಿಭಾಗದ ರಾಜ್ ಕುಮಾರ್ ಸಿದ್ದನಗೌಡ ಅವರನ್ನು ಕುಂದಾಪುರ ಗ್ರಾಮಾಂತರ ಠಾಣೆಗೆ, ಕೊಪ್ಪ ಠಾಣೆಯ ಪುಟ್ಟೇಗೌಡ ಎಸ್ ಎನ್ ಅವರನ್ನು ಪಿಟಿಎಸ್ ಕಡೂರು, ಲಕ್ಕವಳ್ಳಿ ಠಾಣೆಯ ಚಂದ್ರಶೇಖರ್ ಸಿ ಎಲ್ ಅವರನ್ನು ಗೋಣಿಬೀಡು ಠಾಣೆಗೆ, ಮೂಡಿಗೆರೆ ಠಾಣೆಯ ಎ ಬಿ ಮಂಜಯ್ಯ ಅವರನ್ನು ಕಳಸ ಠಾಣೆಗೆ, ಬಾಳೆಹೊನ್ನೂರು ಠಾಣೆಯ ತೇಜಸ್ವಿ ಟಿ ಐ ಅವರನ್ನು ಚಿಕ್ಕಮಗಳೂರು ಠಾಣೆಗೆ, ಲಿಂಗದಹಳ್ಳಿ ಠಾಣೆಯ ಮಂಜುಳಾಬಾಯಿ ಅವರನ್ನು ಎನ್ ಆರ್ ಪುರ ಠಾಣೆಗೆ, ಎನ್ ಆರ್ ಪುರ ಠಾಣೆಯ ರವಿ ಎನ್ ಎನ್ ಅವರನ್ನು ಕೊಪ್ಪ ಠಾಣೆಗೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಮೊಹಮ್ಮದ್ ಆಲಿ ಇಮ್ರಾನ್ ಅವರನ್ನು ಹರಿಹರಪುರ ಠಾಣೆಗೆ, ಚಿಕ್ಕಮಗಳೂರು ಸಂಚಾರ ಠಾಣೆಯ ಸತೀಶ್ ಕೆ ಎಸ್ ಅವರನ್ನು ಜಯಪುರ ಠಾಣೆಗೆ, ಕಡೂರು ಠಾಣೆಯ ಮೂರ್ತಿ ಅವರನ್ನು ಬಾಳೂರು ಠಾಣೆಗೆ ವರ್ಗಾವಣೆ ಮಾಡಲಾಗಿದೆ.


Spread the love