ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮಗಳೇ ಕಾರಣ ಬಿ.ಎಲ್.ಶಂಕರ್

Spread the love

ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮಗಳೇ ಕಾರಣ ಬಿ.ಎಲ್.ಶಂಕರ್

ಬ್ರಹ್ಮಾವರ : ಸಂವಿಧಾನದ ನಾಲ್ಕನೇ ಅಂಗವಾದ ಇಂದಿನ ಪತ್ರಿಕೋದ್ಯಮದಲ್ಲಿ ಬದಲಾವಣೆ ಆಗಿದೆ. ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮಗಳೇ ಕಾರಣ ಎಂದು ಹಿರಿಯ ರಾಜಕಾರಣಿ ಬಿ.ಎಲ್.ಶಂಕರ್ ಹೇಳಿದರು.

ಬ್ರಹ್ಮಾವರದ ಬಂಟರ ಭವನದಲ್ಲಿ ಭಾನುವಾರ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರಸಕ್ತ ಕಾಲಘಟದಲ್ಲಿ ಪತ್ರಿಕೋದ್ಯಮ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಸಂಸ್ಕøತಿಯ ಪ್ರಜಾಪ್ರಭುತ್ವ ನಮ್ಮ ದೇಶದಲ್ಲಿ ಬಲವಾಗಿದೆ. ಬೇರೆ ಯಾವ ದೇಶದಲ್ಲೂ ನಾವು ಇದನ್ನು ಕಾಣಲಾರೆವು. ಸ್ವಾತಂತ್ರ್ಯ ಪೂರ್ವದಲ್ಲಿ3,300 ಪತ್ರಿಕೆಗಳಿದ್ದು, ಇದೀಗ 100ಭಾಷೆಗಳಲ್ಲಿ 60ಸಾವಿರ ಪತ್ರಿಕೆಗಳು ಪ್ರಸಾರವಾಗುತ್ತಿರುವುದು ನಮ್ಮ ದೇಶದ ಹಿರಿಮೆಯನ್ನು ಸಾರುತ್ತದೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ಸುದ್ದಿ, ವಿಶ್ಲೇಷಣೆ, ವಿಮರ್ಶೆಯೊಂದಿಗೆ ಮನೋರಂಜನೆ ಕೂಡಾ ಸೇರಿ ಜಾಹೀರಾತು ಆಧಾರಿತ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡುವಂತಾಗಿದೆ. ಸೇವಾ ರೂಪದಲ್ಲಿದ್ದ ಪತ್ರಿಕೋದ್ಯಮ ಇಂದು ಉದ್ಯಮವಾಗಿ ಬದಲಾಗಿದೆ. ಇದು ಅನಿವಾರ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಇಂದಿನ ಮಾಧ್ಯಮದಲ್ಲಿ ವಾಸ್ತವಾಂಶ ಬದಲಾಗಿದೆ. ಅಭಿಪ್ರಾಯಗಳನ್ನು ವ್ಯಕ್ತಪಡಿಸುವತ್ತ ಗಮನ ಹರಿಸದೇ ನಿಜಾಂಶವನ್ನು ಮಾತ್ರ ಬಿತ್ತರಿಸಿದಲ್ಲಿ ಮಾಧ್ಯಮ ಉಳಿಯುವಂತಾಗುತ್ತದೆ ಎಂದರು.

ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡಿ ಪತ್ರಿಕೋದ್ಯಮ ಇಂದು ಅನೇಕರಿಗೆ ಉದ್ಯೋಗ ನೀಡಿದೆ.ಪತ್ರಕರ್ತರಿಗೆ ನಿಲುವು ಒಲವು ಬೇಕು ಎಂದ ಅವರು ಭವಿಷ್ಯದಲ್ಲಿ ಆಧುನಿಕ ತಂತ್ರಜ್ಞಾನದ ಕಾರಣ ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆಗಳಾಗುತ್ತಿದ್ದು ಬೇಸರದ ಸಂಗತಿ ಎಂದು ಹೇಳಿದರು.
ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಉಪಸ್ಥಿತರಿದ್ದರು.

ಪತ್ರಕರ್ತರಾದ ಶಿವರಾಮ ಆಚಾರ್ಯ ಸ್ವಾಗತಿಸಿದರು. ಶೇಷಗಿರಿ ಭಟ್ ವಂದಿಸಿದರು. ನಾಗರಾಜ್ ಅಲ್ತಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.


Spread the love