ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ಚುನಾವಣೆ ಇದು- ವಿನಯ ಕುಮಾರ್ ಸೊರಕೆ

Spread the love

ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ಚುನಾವಣೆ ಇದು- ವಿನಯ ಕುಮಾರ್ ಸೊರಕೆ

ಉದ್ಯಾವರ: ಮುಂದೆ ಜರಗುತ್ತಿರುವ ಲೋಕಸಭಾ ಚುನಾವಣೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕೆ ಅಥವಾ ಸರ್ವಾಧಿಕಾರ ಉಳಿಯಬೇಕೇ ಎಂದು ನಿರ್ಧರಿಸುವ ಚುನಾವಣೆ. ಈ ದೇಶ ಒಪ್ಪಿಕೊಂಡ ಜಾತ್ಯಾತೀತ ಸಂವಿಧಾನಕ್ಕೆ ಅಪಾಯವಾಗುವ ಲಕ್ಷಣಗಳು ಕಾಣುತ್ತಿವೆ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಳಿ ಬರುತ್ತಾ ಇದೆ. ಇದು ದೇಶದ ಐಕ್ಯತೆಗೆ ಮಾರಕವಾದುದು. ಈ ದೇಶ ಅಖಂಡತೆಯಿಂದ ಜಾತ್ಯಾತೀತವಾಗಿ ಉಳಿಯಬೇಕಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್‍ನ ಮೈತ್ರಿ ಅಭ್ಯರ್ಥಿಯಾದ ಪ್ರಮೋದ್ ಮಧ್ವರಾಜ್‍ರನ್ನು ಗೆಲ್ಲಿಸಬೇಕಾಗಿದೆ.

ಒಬ್ಬ ಕ್ರಿಯಾಶೀಲ ಅಭಿವೃದ್ಧಿಯ ಕನಸುಳ್ಳ ಪ್ರಮೋದ್ ಮಧ್ವರಾಜ್ ಆಯ್ಕೆಯಾಗಿ ಬಂದರೆ ಸ್ವಸ್ಥ ಸಮಾಜದ ಕನಸು ಕಾಣುವ ಮಂದಿಯ ಕನಸು ಈಡೇರುತ್ತದೆ. ನಾನು ಮತ್ತು ಪ್ರಮೋದ್ ಮಧ್ವರಾಜ್ ರಾಜ್ಯ ಗಮನಿಸುವಂತ ಅಭಿವೃದ್ಧಿ ಕೆಲಸಗಳನ್ನು ನಮ್ಮ ಶಾಸಕತ್ವದ ಅವಧಿಯಲ್ಲಿ ಮಾಡಿದರೂ ಕೂಡಾ ವಿರೋಧಿಗಳು ಭಾವಾನಾತ್ಮಕ ಸಂಗತಿಗಳನ್ನು ವೈಭವೀಕರಿಸಿ ನಮ್ಮನ್ನು ಸೋಲಿಸಿರುತ್ತಾರೆ. ಈ ಬಾರಿ ಹಾಗಾಗಬಾರದು ಬಿಜೆಪಿಯ ಸುಳ್ಳು ಅಪಪ್ರಚಾರವನ್ನು ನಾವು ಎಚ್ಚರಿಕೆಯಿಂದ ನಿಗಾವಹಿಸಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜರ ಗೆಲುವಿಗೆ ಶ್ರಮಿಸಬೇಕೆಂದು ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆಯವರು ಉದ್ಯಾವರ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಜರಗಿದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದೀತು. ಕ್ಷೇತ್ರವು ಮುಖ್ಯ ದೇಶವೂ ಮುಖ್ಯ. ಈ ಚುನಾವಣೆ ನಿಷ್ಕ್ರೀಯತೆ ಮತ್ತು ಸಕ್ರಿಯತೆ ನಡುವಿನ, ಕೋಮುವಾದ ಮತ್ತು ಜಾತ್ಯಾತೀತ ನಡುವಿನ, ಮನೆ ಸುಡುವ ಬೆಂಕಿ ಮತ್ತು ಮನೆ ಬೆಳಗುವ ನಡುವಿನ, ಸುಳ್ಳು ಮತ್ತು ಸತ್ಯದ ನಡುವಿನ ಹೋರಾಟ. ನಾವು ಎಚ್ಚರ ತಪ್ಪಿದರೆ ಈ ದೇಶದಲ್ಲಿ ಸರ್ವಾಧಿಕಾರ ನೆಲೆಯಾಗುವ ಸಾಧ್ಯತೆ ಇದೆ. ಹಾಗಾಗಿ ನಾವು ಎಚ್ಚರ ವಹಿಸಿ ಕೆಲಸಗಾರ, ಶುಧ್ಧ ಹಸ್ತದ ಪ್ರಮೋದ್ ಮಧ್ವರಾಜ್‍ರನ್ನು ಗೆಲ್ಲಿಸಬೇಕು ಎಂದು ಕಾಂಗ್ರೆಸ್ ದುರೀಣ ಉದ್ಯಾವರ ನಾಗೇಶ್ ಕುಮಾರ್ ನುಡಿದರು. ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಕ್ಷದ ವೀಕ್ಷಕಿ ಶ್ರೀಮತಿ ಜ್ಯೋತಿ ಹೆಬ್ಬಾರ್‍ರವರು ಮಾತನಾಡಿ ಪ್ರಮೋದ್ ಮಧ್ವರಾಜ್‍ರನ್ನು ಆಯ್ಕೆ ಮಾಡುವುದೆಂದರೆ ಈ ಕ್ಷೇತ್ರದ ಅಭಿವೃದ್ಧಿಯನ್ನು ಆಯ್ಕೆಮಾಡುವುದು ಎಂದರು.

ಸಭೆಯ ಅಧ್ಯಕ್ಷತೆಯನ್ನು ಕಾಪು ಬ್ಲಾಕ್ ಉತ್ತರ ವಲಯದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ವಹಿಸಿದ್ದರು.

ವೇದಿಕೆಯಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗಿರೀಶ್ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಮೀನುಗಾರ ಕಾಂಗ್ರೆಸ್‍ನ ರಾಷ್ಟ್ರೀಯ ಕಾರ್ಯದರ್ಶಿ ಕಿರಣ ಕುಮಾರ್, ಕಾಪು ಬ್ಲಾಕ್ ಉತ್ತರ ವಲಯ ಉಪಾಧ್ಯಕ್ಷರಾದ ಲೋರೆನ್ಸ್ ಡೇಸಾ, ಪ್ರಧಾನ ಕಾರ್ಯದರ್ಶಿ ದಿವಾಕರ ಬೊಳ್ಜೆ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸ್ಟೀವನ್ ಕುಲಾಸೊ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹೆಲೆನ್ ಫೆರ್ನಾಂಡಿಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಧರ ಕಲಾಯಿ, ಎಸ್.ಸಿ. ಘಟಕದ ಅಧ್ಯಕ್ಷರಾದ ಗಿರಿಶ್ ಗುಡ್ಡೆಅಂಗಡಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಇರ್ಫಾನ್ ಸಂಪಿಗೆನಗರ, ಗ್ರಾಮೀಣ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರ ಶೇಖರ್ ಕೋಟ್ಯಾನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಮೇರಿ ಡಿ’ಸೋಜಾ ಉಪಸ್ಥಿತರಿದ್ದರು, ಕಾಪು ಬ್ಲಾಕ್ ಉತ್ತರ ವಲಯ ಸಮಿತಿಯ ಕಾರ್ಯದರ್ಶಿ ಆಬಿದ್ ಆಲಿಯವರು ಪ್ರಾರಂಭದಲ್ಲಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.


Spread the love