ಪ್ರಾಣಿ ಪಕ್ಷಿಗಳಿಗೆ ನೀರಿಟ್ಟು ಫೋಟೊ ಕಳಿಸಿ ಸಾಸ್ತಾನ ಮಿತ್ರರ ಬಹುಮಾನ ಗೆಲ್ಲಿ!

Spread the love

ಪ್ರಾಣಿ ಪಕ್ಷಿಗಳಿಗೆ ನೀರಿಟ್ಟು ಫೋಟೊ ಕಳಿಸಿ ಸಾಸ್ತಾನ ಮಿತ್ರರ ಬಹುಮಾನ ಗೆಲ್ಲಿ!

ಉಡುಪಿ: ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿಕೊಂಡು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳನ್ನು ಸ್ವತಃ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿಕೊಂಡು ಬರುತ್ತಿರುವ ಸಾಸ್ತಾನ ಮಿತ್ರರ ತಂಡ ಬೇಸಿಗೆಯ ದಾಹದಿಂದ ನೀರಿಗಾಗಿ ಆಶ್ರಯ ಹುಡುಕುತ್ತಿರುವ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕೆಲಸಕ್ಕೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.

ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾನವೀಯ ಸೇವೆಗೈಯುತ್ತಿರುವ ಸಾಸ್ತಾನ ಮಿತ್ರರ ತಂಡ ಪ್ರಾಣಿ ಪಕ್ಷಿಗಳ ಜಲದಾಹದ ಕುರಿತು ಜಾಗೃತಿ ಮೂಡಿಸಲು ತಮ್ಮ ಮನೆಯ ತೆರೆದ ಸ್ಥಳಗಳಲ್ಲಿ ಹಕ್ಕಿಗಳಿಗೆ ನೀರನ್ನು ಇಡುವುದರ ಮೂಲಕ ನೆರವಾಗುತ್ತಿದ್ದಾರೆ. ಹಾಗೂ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಇದರ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಜನರು ಸದಾ ತಂಪನ್ನು ಬಯಸುವ, ನೀರಿನಾಶ್ರಯದಲ್ಲಿರ ಬಯಸುವ ಪ್ರಾಣಿ – ಪಕ್ಷಿಗಳು ಬೇಸಿಗೆಯ ದಾಹ ತಣಿಯಲು ನಾವು ಒಂದು ಪಾತ್ರೆಯಲ್ಲಿ  ನೀರಿಟ್ಟು ಅವುಗಳ ದಾಹ ತೀರಿಸುವ ಕೆಲಸದಲ್ಲಿ ಕೈಜೋಡಿಸುವ ಉದ್ದೇಶದಿಂದ “ಮೂಕ ಸ್ಪಂದನೆ” “Give Water- Save Birds & Animals” ಎಂಬ ಅಭಿಯಾನಕ್ಕೆ ಕರೆ ನೀಡಿದೆ.

ನೀರನ್ನು ಬಯಸಿ ಹುಡುಕಿ ಬಂದ ಪ್ರಾಣಿಪಕ್ಷಿಗಳಿಗೆ ನಮ್ಮಿಂದಾದ ಅಳಿಲ ಸೇವೆ ನೀಡುವ ನಿಟ್ಟಿನಲ್ಲಿ ಅವುಗಳಿಗೆ ನೀರಿಡುವುದರೊಂದಿಗೆ, ಪ್ರಾಣಿಗೋ, ಪಕ್ಷಿಗೋ ನೀರಿಟ್ಟ  ಪೋಟೊವನ್ನು ವಾಟ್ಸಾಪ್ ಅಥವಾ ಇಮೇಯ್ಲ್  ಮೂಲಕ ಕಳುಹಿಸಿ ಬಹುಮಾನ ಗೆಲ್ಲುವ ಅವಕಾಶವನ್ನು ಕೂಡ ಅಭಿಯಾನದಲ್ಲಿ ಜೋಡಿಸಿಕೊಂಡಿದ್ದಾರೆ. ಆಸಕ್ತರು ಈ ಅಭಿಯಾನದಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಲು ಅವಕಾಶವಿದೆ.

ಇನ್ನೇಕೆ ತಡ ಪ್ರಾಣಿಗೋ, ಪಕ್ಷಿಗೋ ನೀರಿಟ್ಟು ಪೋಟೊ ಸಾಸ್ತಾನ ಮಿತ್ರರ ತಂಡಕ್ಕೆ ಕಳುಹಿಸಬಹುದು

ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ 8197407570 ಅಥವಾ ಇಮೇಲ್ sasthan576226@gmail.com


Spread the love