ಬಂಟರ ಸಂಘದ ಚುನಾವಣೆ: ಮಾಲಾಡಿ ಅಜಿತ್ ಕುಮಾರ್ ರೈ ಗೆಲುವು

Spread the love

ಬಂಟರ ಸಂಘದ ಚುನಾವಣೆ: ಮಾಲಾಡಿ ಅಜಿತ್ ಕುಮಾರ್ ರೈ ಗೆಲುವು

ಮಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಪ್ರತಿಷ್ಠಿತ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಸರಕಾರಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಜಿತ್ ಕುಮಾರ್ ರೈ ಮಾಲಾಡಿ ಬಣ ಗೆಲುವು ಸಾಧಿಸಿದೆ.

ಬಂಟ ಸಮುದಾಯದ ಎರಡು ಬಣಗಳ ನಡುವಿನ ಜಿದ್ದಾಜಿದ್ದಿನ ಚುನಾವಣೆಯಲ್ಲಿ ವಿಜಯೀ ಅಭ್ಯರ್ಥಿ ಅಜಿತ್ ಕುಮಾರ್ ರೈ ಮಾಲಾಡಿ 4791 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಸುರೇಶ್ಚಂದ್ರ ಶೆಟ್ಟಿ 2193 ಮತಗಳನ್ನು ಪಡೆದು ಪರಾಭವಗೊಂಡಿದ್ದು, ಒಟ್ಟು ಮತಗಳ ಅಂತರ 2598. ಈ ಮೂಲಕ ಮಾಲಾಡಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ನಗರದ ಬಂಟ್ಸ್ಹಾಸ್ಟೆಲ್ ಶ್ರೀ ರಾಮಕೃಷ್ಣ ಪ್ರಾಥಮಿಕ ಶಾಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆದು, ಚುನಾವಣೆ ಅಧಿಕಾರಿ ಎಮ್ ಅರುಣ್ ಶೆಟ್ಟಿ ಫಲಿತಾಂಶ ಘೋಷಿಸಿದರು.


Spread the love