ಬಂಟ್ವಾಳ ಕ್ಷೇತ್ರ-ಶಾಸಕ ಬಿ.ರಮಾನಾಥ ರೈ ಅವರ ಅನುದಾನ ಬಿಡುಗಡೆ

Spread the love

ಬಂಟ್ವಾಳ ಕ್ಷೇತ್ರ-ಶಾಸಕ ಬಿ.ರಮಾನಾಥ ರೈ ಅವರ ಅನುದಾನ ಬಿಡುಗಡೆ

ಮ0ಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಬಂಟ್ವಾಳ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ 2015-16ನೇ ಸಾಲಿನ ಅನುದಾನದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಈ ಕೆಳಗಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲಾಗಿದೆ.
ಪಂಜಿಕಲ್ಲು ಸರಕಾರಿ ಪ್ರೌಢಶಾಲೆ ಆಟದ ಮೈದಾನ ವಿಸ್ತರಣೆ ಕಾಮಗಾರಿಗೆ ರೂ. 2 ಲಕ್ಷ, ಮಣಿನಾಲ್ಕೂರು ಗ್ರಾಮದ ಕುಟ್ಟಿಕಳ ಸರಕಾರಿ ಶಾಲೆಯ ಆವರಣದ ಬಳಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ರೂ. 2.50 ಲಕ್ಷ, ಉಳಿ ಗ್ರಾಮದ ಅಗರಗಂಡಿ ನೆಕ್ಕಿಲಪಲ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 2 ಲಕ್ಷ, ಬಡಗ ಕಜೆಕಾರು ಗ್ರಾಮದ ಮಿತ್ತಳಿಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 1 ಲಕ್ಷ, ಕುರಿಯಾಳ ಗ್ರಾಮದ ಮೇಗಿನ ಕುರಿಯಾಳ ರಸ್ತೆ ಅಭಿವೃದ್ಧಿಗೆ ರೂ. 1.50 ಲಕ್ಷ, ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ತಡ್ಯಾಲು ಗುಡ್ಡೆ ರಸ್ತೆ ಡಾಮರೀಕರಣಕ್ಕೆ ರೂ. 4 ಲಕ್ಷ, ಬಿ ಮೂಡ ಗ್ರಾಮದ ನಂದರಬೆಟ್ಟು ಅಂಗನವಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 1.20 ಲಕ್ಷ, ಕಡೇಶ್ವಾಲ್ಯ ಗ್ರಾಮದ ಸೇರಾ ಬಟ್ರ ಬೈಲು ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 5 ಲಕ್ಷ, ವೀರಕಂಬ ಗ್ರಾಮದ ಕೆಲಿಂಜ ಬೆಳತಡ್ಕ ಮಸೀದಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ರೂ. 5 ಲಕ್ಷ, ವೀರಕಂಬ ಗ್ರಾಮದ ಸಿರಿಪ್ರಾಜೆ -ಪಾತ್ರ ತೋಟ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 5 ಲಕ್ಷ, ಮಂಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ದುರಸ್ತಿಗೆ ರೂ. 1 ಲಕ್ಷ, ಬಾಳ್ತಿಲ ಗ್ರಾಮದ ಕಶೆಕೋಡಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೋಳಿಸಲು ರೂ. 1 ಲಕ್ಷ, ಕೊಳ್ನಾಡು ಗ್ರಾಮದ ಕೋಜುಗೋಳಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ರೂ. 1 ಲಕ್ಷ, ಕೊಳ್ನಾಡು ಗ್ರಾಮದ ಹೊಸಮನೆ ಅಂಗನವಾಡಿ ಕಟ್ಟಡ ಕಾಮಗಾರಿಗೆ ರೂ. 1 ಲಕ್ಷ, ನೆಟ್ಲಮುಡ್ನೂರು ಗ್ರಾಮದ ಭಗವಂತ ಕೋಡಿ ರಸೆ ಅಭಿವೃದ್ಧಿ ಕಾಮಗಾರಿಗೆ ರೂ. 5 ಲಕ್ಷ, ಪೆರಾಜೆ ಗ್ರಾಮದ ಬುಡೋಳಿ ನೇರಳಕಟ್ಟೆ ರಸ್ತೆ ದುರಸ್ಥಿ ಕಾಮಗಾರಿಗೆ ರೂ. 5 ಲಕ್ಷ, ಬಡಗಬೆಳ್ಳೂರು ಗ್ರಾಮದ ಕಲ್ಪನೆ ವರಟೀಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 5 ಲಕ್ಷ, ಸಜೀವ ಮುನ್ನೂರು ಗ್ರಾಮದ ಮುಲಾಯಿಬೆಟ್ಟು ರಸ್ತೆ ದುರಸ್ಥಿ ಕಾಮಗಾರಿಗೆ ರೂ. 5 ಲಕ್ಷ ಅನುದಾನವನ್ನು ಮ0ಜೂರುಗೊಳಿಸಲಾಗಿದೆ ಎ0ದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Spread the love