ಬಜರಂಗದಳ ಸಂಚಾಲಕನ ಶವ ಪತ್ತೆ; ಕೊಲೆ ಶಂಕೆ

Spread the love

ಬಜರಂಗದಳ ಸಂಚಾಲಕನ ಶವ ಪತ್ತೆ; ಕೊಲೆ ಶಂಕೆ
ಮಂಗಳೂರು: ಬೆಂಗ್ರೆ ಬಜರಂಗದಳ ಸಂಚಾಲಕನ ಶವ ಶುಕ್ರವಾರ ಪತ್ತೆಯಾಗಿದೆ.
ಮೃತನನ್ನು ಬೆಂಗ್ರೆ ನಿವಾಸಿ ಜಗದೀಶ್ ಸುವರ್ಣ ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಗುರುವಾರ ಜಗದೀಶ್ ಅವರು ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದು ಮರಳಿಲ್ಲ. ಶುಕ್ರವಾರ ಅವರ ಶವ ಸಮುದ್ರ ಕಿನಾರೆಯ ಬಳಿ ಪತ್ತೆಯಾಗಿದ್ದು, ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಜಗದೀಶ್ ಬಜರಂಗದಳ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು, ಇತ್ತೀಚೆಗೆ ಸಂಚಾಲಕರಾಗಿ ಆಯ್ಕೆಯಾಗಿದ್ದರು.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ,
ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love