ಬಜ್ಪೆ : ಯುವಕರಿಬ್ಬರಿಗೆ ಗಂಭೀರ ಹಲ್ಲೆ

Spread the love

ಬಜ್ಪೆ : ಯುವಕರಿಬ್ಬರಿಗೆ ಗಂಭೀರ ಹಲ್ಲೆ

ಮಂಗಳೂರು: ಯುವಕರಿಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬಜ್ಪೆ ಸಮೀಪ ಗುರುವಾರ ಸಂಭವಿಸಿದೆ.

 

ಗಾಯಗೊಂಡವರನ್ನು ಬಜ್ಪೆ ನಿವಾಸಿಗಳಾದ ಸರ್ಪರಾಜ್ (30) ಮತ್ತು ಇಲಿಯಾಸ್ (40) ಎಂದು ಗುರುತಿಸಲಾಗಿದೆ.

ಪ್ರತ್ಯಕ್ಷದರ್ಶಿಳ ಪ್ರಕಾರ ಸರ್ಪರಾಜ್ ಫೆಬ್ರಿಕೇಶನ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಪ್ರೀಪೆಯ್ಡ್ ಟ್ಯಾಕ್ಸಿಯ ಚಾಲಕನಾಗಿ ಮಂಗಳೂರು ವಿಮಾನನಿಲ್ದಾಣದಲ್ಲಿ ಕಾರ್ಯ ಕೂಡ ನಿರ್ವಹಿಸುತ್ತಾರೆ. ಗುರುವಾರ ಸಂಜೆ ಇಬ್ಬರು ವ್ಯಕ್ತಿಗಳು ಸರ್ಫರಾಜ್ ಅವರೊಂದಿಗೆ ಮಾತನಾಡಲು ಬಂದಿದ್ದು ಇಬ್ಬರೂ ಸೇರಿ ಸರ್ಫರಾಜ್ ಅವರಿಗೆ ಮಾರಕಾಯುಧದಿಂದ ತಿವಿದಿದ್ದು ಅವರನ್ನು ರಕ್ಸಿಸಲು ಬಂದ ಇಲಿಯಾಸ್ ಅವರಿಗೆ ಕೂಡ ತಿವಿದಿದ್ದಾರೆ ಎನ್ನಲಾಗಿದೆ.

ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love