ಬಶೀರ್ ಹತ್ಯೆ ಸಮರ್ಥಿಸಿಕೊಂಡ ಶೇಣವ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲು

Spread the love

ಬಶೀರ್ ಹತ್ಯೆ ಸಮರ್ಥಿಸಿಕೊಂಡ ಶೇಣವ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲು

ಮಂಗಳೂರು: ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಕೊಟ್ಟಾರ ಚೌಕಿಯಲ್ಲಿ ನಡೆದ ಬಶೀರ್ ಹತ್ಯೆಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ವಿರುದ್ದ ಬಂದರು ಠಾಣಾ ಪೋಲಿಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜನವರಿ 28ರಂದ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಗದೀಶ್ ಶೆಣವ ಅವರು ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಬಶೀರ್ ಹತ್ಯೆ ಮಾಡಬಾರದಾ ಎಂದು ಕೊಲೆಗಡುಕರಿಗೆ ಬೆಂಬಲ ಸೂಚಿಸಿದ್ದರು. ಅಲ್ಲದೆ ವಿಎಚ್ ಪಿ ಜಿಲ್ಲಾಧ್ಯಕ್ಷನಾಗಿ ತಾನು ಬಶೀರ್ ಕೊಲೆಯನ್ನು ಸಮರ್ಥಿಸುವುದಾಗಿ ಹೇಳಿದ್ದರು. ಇವರ ಹೇಳಿಕೆಯನ್ನು ಹಲವಾರು ಸಂಘಟನೆಗಳು ಖಂಡಿಸಿದ್ದು, ಅದರ ಬಳಿಕ ಬಂದರು

ಪೋಲಿಸ್ ಠಾಣೆಯ ಪಿಎಸ್ ಐ ಅನಂತ ಮುರ್ಡೇಶ್ವರ ಅವರು ಜಗದೀಶ್ ಶೆಣವ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


Spread the love